Advertisement

2 ವರ್ಷಗಳ ಬಳಿಕ ಭಾರತಕ್ಕೆ ಪಿಸಿಬಿ ಅಧಿಕಾರಿಗಳ ತಂಡ

06:00 AM Apr 21, 2018 | Team Udayavani |

ಹೊಸದಿಲ್ಲಿ: ಕೋಲ್ಕತಾದಲ್ಲಿ ಎ. 21ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸಭೆ ಆಯೋಜಿಸಿದೆ. ಇದಕ್ಕೆ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧಿಕಾರಿಗಳು ಆಗಮಿಸಲಿದ್ದಾರೆ ಎನ್ನಲಾಗಿದೆ. 

Advertisement

ಬರೋಬ್ಬರಿ 2 ವರ್ಷಗಳ ಬಳಿಕ ಪಿಸಿಬಿ ಅಧಿಕಾರಿಗಳು ಭಾರತಕ್ಕೆ ಆಗಮಿಸುತ್ತಿದ್ದಾರೆ ಎನ್ನುವುದು ವಿಶೇಷ. ಸಭೆಗೆ ಪಿಸಿಬಿ ಮುಖ್ಯಸ್ಥ ನಿಜಾಮ್‌ ಸೇಥಿ, ಕ್ರಿಕೆಟ್‌ ನಿರ್ವಹಣಾ ಅಧಿಕಾರಿ ಸುಭಾನ್‌ ಅಹ್ಮದ್‌ ಆಗಮಿಸುತ್ತಿರುವ ಪ್ರಮುಖರು ಎನ್ನಲಾಗಿದೆ. 

ಇದೇ ವೇಳೆ ಭಾರತ -ಪಾಕಿಸ್ಥಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ನಡೆಸುವ ಕುರಿತು ಗಂಭೀರ ಮಾತುಕತೆ ನಡೆಯುವ ಸಾಧ್ಯತೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next