Advertisement

ಪಾಕಿಸ್ಥಾನದಲ್ಲೀಗ ರಾಷ್ಟ್ರಪತಿ, ಸರಕಾರ‌ದ ನಡುವೆ ತೀವ್ರ ತಿಕ್ಕಾಟ

11:55 PM Apr 08, 2023 | Team Udayavani |

ಇಸ್ಲಾಮಾಬಾದ್‌: ತೀವ್ರವಾದ ಆರ್ಥಿಕ- ರಾಜಕೀಯ ಬಿಕ್ಕಟ್ಟಿನಿಂದ ನರಳುತ್ತಿರುವ ಪಾಕಿಸ್ಥಾನ ಈಗ ಇನ್ನೊಂದು ಬಿಕ್ಕಟ್ಟಿಗೆ ಹೊರಳಿಕೊಂಡಿದೆ. ಅಲ್ಲೀಗ ಸರ್ವೋಚ್ಚ ನ್ಯಾಯಪೀಠ ಮತ್ತು ಕೇಂದ್ರ ಸರಕಾರ‌ದ ನಡುವೆ ತಿಕ್ಕಾಟ ಶುರುವಾಗಿದೆ. ಮಾತ್ರವಲ್ಲ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರಿಂದ ನೇಮಿಸಲ್ಪಟ್ಟಿದ್ದ ಪಾಕ್‌ ಅಧ್ಯಕ್ಷ ಆರಿಫ್ ಅಲ್ವಿ ಮತ್ತು ಕೇಂದ್ರ ಸರಕಾರ‌ದ ನಡುವೆಯೂ ಜಟಾಪಟಿ ಶುರುವಾಗಿದೆ.

Advertisement

ಸರ್ವೋಚ್ಚ ನ್ಯಾಯಾಲಯದ ಅಧಿಕಾರಕ್ಕೆ ಕಡಿವಾಣ ಹಾಕಲು ಶೆಹಬಾಜ್‌ ಶರೀಫ್ ನೇತೃತ್ವದ ಸಮ್ಮಿಶ್ರ ಸರಕಾರ‌ (ಪಾಕಿಸ್ಥಾನ ಮುಸ್ಲಿಮ್‌ ಲೀಗ್‌ ಪಕ್ಷ) ಮಸೂದೆಯೊಂದನ್ನು ಮಂಡಿಸಿ ಸಂಸತ್ತಿನ ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆದುಕೊಂಡಿದೆ. ಇದನ್ನು ರಾಷ್ಟ್ರಪತಿ ಆರಿಫ್ ಅಲ್ವಿಯವರ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ಅವರು ಶನಿವಾರ ಇದಕ್ಕೆ ಸಹಿಹಾಕಲು ತಿರಸ್ಕರಿಸಿದ್ದಾರೆ ಮಾತ್ರವಲ್ಲ ಇದು ಸಂಸತ್ತಿನ ಅಧಿಕಾರ ವ್ಯಾಪ್ತಿಯಿಂದ ದೂರವಿದೆ ಎಂದಿದ್ದಾರೆ. ಇದು ಶೆಹಬಾಜ್‌ ಸರಕಾರ‌ವನ್ನು ಕೆರಳಿಸಿದೆ.

ಬಿಕ್ಕಟ್ಟಿಗೆ ಕಾರಣವೇನು?: ಪಾಕಿಸ್ಥಾನ ಚುನಾವಣ ಆಯೋಗ ಪಂಜಾಬ್‌ ಚುನಾವಣೆಯನ್ನು ಎ.10ರಂದು ನಡೆಸುವ ಬದಲು ಅ.8ಕ್ಕೆ ಮುಂದೂಡಿತ್ತು. ಇತ್ತೀಚೆಗೆ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಚುನಾವಣೆಗೆ ಮೇ 14 ಅನ್ನು ಅಂತಿಮ ಗಡುವೆಂದು ಸೂಚಿಸಿತ್ತು. ಇದನ್ನು ಶೆಹಬಾಜ್‌ ಸರಕಾರ‌ ನೇರವಾಗಿ ಟೀಕಿಸಿದೆ.

ಬದಲಾವಣೆಗಳೇನು?: ಸರ್ವೋಚ್ಚ ನ್ಯಾಯಾ ಲಯ ತಾನಾಗಿಯೇ ಕೆಲವು ನಿರ್ಧಾರಗಳನ್ನು ಮಾಡಲು ಹೊಸ ಮಸೂದೆ ಅನುಮತಿ ನಿರಾ ಕರಿಸುತ್ತದೆ. ಸಂವಿಧಾನದ ವಿಧಿ 184 (3)ರ ವ್ಯಾಪ್ತಿಗೆ ಬರುವ ಯಾವುದೇ ವಿಷಯಗಳನ್ನು ಮೊದಲು ಸರ್ವೋಚ್ಚ ಪೀಠದ ಮೂವರು ನ್ಯಾಯ ಮೂರ್ತಿಗಳೂ ಸೇರಿದ ಸಮಿತಿಯ ಮುಂದೆ ಇಡ ಬೇಕು. ಅಲ್ಲಿ ಬಹು ಮತದಿಂದ ನಿರ್ಧಾರವಾಗ ಬೇಕೆಂದು ಹೇಳಲಾಗಿದೆ. ಈ ಮಸೂದೆಗೆ ರಾಷ್ಟ್ರಪತಿ ಸಹಿಹಾಕಲು ನಿರಾಕರಿಸಿರುವುದರಿಂದ ಸಂಸತ್ತಿನ ಜಂಟಿ ಸದನದ ಮುಂದೆ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆಯಲು ಪಾಕ್‌ ಸರಕಾರ‌ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next