Advertisement

ATS: ಮೀರತ್ ನಲ್ಲಿ ಪಾಕ್ ಐಎಸ್ಐ ಏಜೆಂಟ್ ಬಂಧನ; ರಾಯಭಾರ ಕಚೇರಿಯಲ್ಲಿ ಕೆಲಸದಲ್ಲಿದ್ದ ಆರೋಪಿ

12:35 PM Feb 04, 2024 | Team Udayavani |

ಮೀರತ್: ಉತ್ತರ ಪ್ರದೇಶ ರಾಜ್ಯದ ಭ್ರಷ್ಟಾಚಾರ ನಿಗ್ರಹ ಪಡೆಯು ಪಾಕಿಸ್ತಾನದ ಐಎಸ್ಐ ಏಜೆಂಟ್ ಒಬ್ಬನನ್ನು ಮೀರತ್ ನಲ್ಲಿ ಬಂಧಿಸಿದೆ. ರಷ್ಯಾದ ಮಾಸ್ಕೋದಲ್ಲಿ ಈತ ಭಾರತೀಯ ರಾಯಭೇರಿ ಕಚೇರಿಯಲ್ಲಿ ನೇಮಕಗೊಂಡಿದ್ದ ಎಂಬ ವಿಚಾರ ಬಯಲಾಗಿದೆ.

Advertisement

ಸತ್ಯೇಂದ್ರ ಸಿವಾಲ್ ಅವರನ್ನು 2021 ರಿಂದ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದೆ. ಅವರು ಅಲ್ಲಿ ಭಾರತ ಬೇಸ್ ಡ್ ಭದ್ರತಾ ಸಹಾಯಕರಾಗಿ (IBSA) ಕೆಲಸ ಮಾಡಿದರು.

ಅಧಿಕೃತ ಹೇಳಿಕೆಯ ಪ್ರಕಾರ, ಭಯೋತ್ಪಾದನಾ ನಿಗ್ರಹ ದಳವು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಗೂಢಚಾರಿಕೆ ನಡೆಸುತ್ತಿರುವ ಬಗ್ಗೆ ತನ್ನ ಮೂಲಗಳಿಂದ ಸುಳಿವು ಪಡೆದಿದೆ.

ಮಾಹಿತಿಯ ಮೇರೆಗೆ ಯುಪಿ ಎಟಿಎಸ್ ಸಿವಾಲ್ ನನ್ನು ವಿಚಾರಣೆಗೆ ಒಳಪಡಿಸಿದೆ. ಆರಂಭದಲ್ಲಿ ಆತ ಅಸಮಂಜಸ ಉತ್ತರಗಳನ್ನು ನೀಡಿದ್ದ, ಆದಾಗ್ಯೂ, ನಂತರ ಅವರು ಬೇಹುಗಾರಿಕೆಯನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ಮೀರತ್‌ನಿಂದ ಬಂಧಿಸಲಾಗಿದೆ.

ವಿಚಾರಣೆಯ ಸಮಯದಲ್ಲಿ, ಸತ್ಯೇಂದ್ರ ಸಿವಾಲ್ ಅವರು ಭಾರತೀಯ ಸೇನೆ ಮತ್ತು ಅದರ ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಹೊರತೆಗೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಹಣದ ಆಮಿಷ ಒಡ್ಡುತ್ತಿದ್ದರು ಎಂದು ಬಹಿರಂಗಪಡಿಸಿದ್ದಾನೆ. ಆತ ಭಾರತೀಯ ರಾಯಭಾರ ಕಚೇರಿ, ರಕ್ಷಣಾ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಪ್ರಮುಖ ಮತ್ತು ಗೌಪ್ಯ ಮಾಹಿತಿಯನ್ನು ಐಎಸ್‌ಐ ಹ್ಯಾಂಡ್ಲರ್‌ ಗಳಿಗೆ ರವಾನಿಸಿದ್ದಾನೆ ಎಂದು ವರದಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next