Advertisement

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೈನಿಕ ಬಲಿ; ದೇಹವನ್ನು ಹಿಂದೆ ತೆಗೆದುಕೊಳ್ಳಿ ಎಂದ ಸೇನೆ

04:34 PM Jan 02, 2022 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಕೆರಾನ್ ಸೆಕ್ಟರ್‌ ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು (ಎಲ್‌ಒಸಿ) ದಾಟಲು ಪ್ರಯತ್ನಿಸುತ್ತಿದ್ದಾಗ ನಿನ್ನೆ ಕೊಲ್ಲಲ್ಪಟ್ಟ ಪಾಕ್ ನುಸುಳುಕೋರನ ಮೃತದೇಹವನ್ನು ವಾಪಸು ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ಭಾನುವಾರ ತನ್ನ ಪಾಕಿಸ್ತಾನದ ಸಹವರ್ತಿಯನ್ನು ಕೇಳಿದೆ.

Advertisement

ಪಾಕಿಸ್ಥಾನದ ಗಡಿ ಆ್ಯಕ್ಷನ್ ತಂಡವು ಶನಿವಾರ ಕೆರನ್ ಸೆಕ್ಟರ್ ನಲ್ಲಿ ಗಡಿ ನುಸುಳಲು ಪ್ರಯತ್ನ ನಡೆಸಿತ್ತು. ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಭಾರತೀಯ ಸೇನೆಯು ಈ ನುಸುಳು ಕ್ರಿಯೆಯನ್ನು ತಡೆದು, ವ್ಯಕ್ತಿಯನ್ನು ಹೊಡೆದುರುಳಿಸಿತ್ತು. ಆತ ಪಾಕಿಸ್ಥಾನಿ ಪ್ರಜೆಯಾಗಿದ್ದಾನೆ ಎಂದು ಮೇಜರ್ ಜನರಲ್ ಎಸ್ ಪೆಂಧಾರ್ಕರ್ ಹೇಳಿದ್ದಾರೆ.

ಇದನ್ನೂ ಓದಿ:ಹೆಚ್ಚಿದ ಕೋವಿಡ್ ಭೀತಿ: ಬಂಗಾಳದಲ್ಲಿ ಶಾಲೆ-ಕಾಲೇಜು, ಜಿಮ್, ಸಲೂನ್ ಬಂದ್!

ಮೊಹಮ್ಮದ್ ಶಬೀರ್ ಮಲಿಕ್ ಎಂದು ಗುರುತಿಸಲಾಗಿರುವ ಯೋಧ ಪಾಕಿಸ್ತಾನ ಸೇನೆಯ ಬಾರ್ಡರ್ ಆಕ್ಷನ್ ಟೀಮ್ ಅಥವಾ ಬಿಎಟಿಯ ಸದಸ್ಯನಾಗಿದ್ದಿರಬಹುದು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next