Advertisement

ದೇಶದ ಮೊದಲ ಹಿಂದ್‌ ಕೇಸರಿ : ಪೈಲ್ವಾನ್‌ ಶ್ರೀಪತಿ ಖಂಚನಾಳೆ ನಿಧನ

11:36 AM Dec 16, 2020 | sudhir |

ಚಿಕ್ಕೋಡಿ: ತೊಡೆ ತಟ್ಟಿ ನೋಡ ನೋಡುತ್ತಿದ್ದಂತೆ ಎದುರಾಳಿಯನ್ನು ಚಿತ್‌ ಮಾಡುತ್ತಿದ್ದ ಭಾರತದ ಮೊದಲ ಹಿಂದ್‌ ಕೇಸರಿ,
ತಾಲೂಕಿನ ಯಕ್ಸಂಬಾದ ಪೈಲ್ವಾನ ಶ್ರೀಪತಿ ಶಂಕರ ಖಂಚನಾಳೆ (86) ಸೋಮವಾರ ನೆರೆಯ ಮಹಾರಾಷ್ಟ್ರ ಕೊಲ್ಲಾಪೂರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisement

ಶ್ರೀಪತಿ ಕಂಚನಾಳೆ 1959ರ ಡಿ. 20ರಂದು ದೆಹಲಿಯ ನ್ಯೂ ರೈಲ್ವೆ ಸ್ಟೇಡಿಯಂನಲ್ಲಿ ನಡೆದ ಕುಸ್ತಿಯಲ್ಲಿ ಪಂಜಾಬದ ಖ್ಯಾತ ಪೈಲ್ವಾನ್‌ ರುಸ್ತಮ-ಎ-ಪಂಜಾಬ್‌ ಬತ್ತಾಶಿಂಗ್‌ ಅವರನ್ನು ಪರಾಭವಗೊಳಿಸಿ ಹಿಂದ್‌ ಕೇಸರಿ ಆಗಿ ಹೊರಹೊಮ್ಮಿದ್ದರು. ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ ಅವರು ಖಂಚನಾಳೆಯವರಿಗೆ ಹಿಂದ್‌ ಕೇಸರಿ ಪ್ರಶಸ್ತಿ ನೀಡಿ ಸನ್ಮಾನಿಸಿದ್ದರು.

ತದನಂತರ ಕರ್ನಾಟಕ ಸರಕಾರ ಕರ್ನಾಟಕ ಭೂಷಣ ಮತ್ತು ಮಹಾರಾಷ್ಟ್ರ ಸರಕಾರ ಶಿವ ಛತ್ರಪತಿ ಪ್ರಶಸ್ತಿ ನೀಡಿ ಸನ್ಮಾನಿಸಿದ್ದವು. ಇವರು ರಾಷ್ಟ್ರೀಯ ತಾಲಿಮ (ಗರಡಿ ಮನೆ) ಸಂಘದ ಅಧ್ಯಕ್ಷರಾಗಿದ್ದರು. ಇವರು ಪಟ್ಟಣದ ಶ್ರೀಪತಿ ಹಿರುಕುಡೆ
ಇವರಿಂದ ಕುಸ್ತಿ ಕಲಿತಿದ್ದರು. ಇವರು ಅನೇಕ ವರ್ಷಗಳಿಂದ ಕೊಲ್ಲಾಪೂರ ನಗರದಲ್ಲಿ ವಾಸವಾಗಿ ಅಲ್ಲಿನ ಶಾಹುಪುರಿ ತಾಲಿಮಿನಲ್ಲಿ (ಗರಡಿ ಮನೆ) ಅನೇಕ ಪೈಲ್ವಾನ್‌ಗಳಿಗೆ ಮಾರ್ಗದರ್ಶನ ನೀಡುತ್ತಾ ಪೈಲ್ವಾನ್‌ಗಳನ್ನು ಸಿದ್ಧಪಡಿಸಿದ್ದರು. ಇವರ
ಮಾರ್ಗದರ್ಶನದಲ್ಲಿ ತಯಾರಾದ ಅನೇಕ ಪೈಲ್ವಾನರು ದೇಶ-ವಿದೇಶಗಳಲ್ಲಿ ಇಂದು ಹೆಸರು ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ ಪಂಚಗಂಗಾ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮೃತರು ಪತ್ನಿ, ಇಬ್ಬರು ಪುತ್ರರು, ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಇದನ್ನೂ ಓದಿ:ಪರಿಷತ್ ನಲ್ಲಿ ಗೂಂಡಾಗಿರಿ ಮಾಡಿದವರ ಅಮಾನತು ಮಾಡಲಿ: ಸಚಿವ ಎಸ್ ಟಿ ಸೋಮಶೇಖರ್

Advertisement

Udayavani is now on Telegram. Click here to join our channel and stay updated with the latest news.

Next