Advertisement

ಪಡುಪಣಂಬೂರು ಗ್ರಾ.ಪಂ. ಆಡಳಿತ ಮಾದರಿ: ಶ್ರೀನಿವಾಸ ಪೂಜಾರಿ

12:49 PM Jul 28, 2018 | Team Udayavani |

ಪಡುಪಣಂಬೂರು : ಅನುದಾನಗಳ ಕೊರತೆ ಇದ್ದರೂ ಸೀಮಿತ ಅನುದಾನದಲ್ಲಿಯೇ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ರೂಪಿಸಿ ಕೊಂಡಿರುವ ಪಡುಪಣಂಬೂರು ಗ್ರಾ.ಪಂ. ಮಾದರಿಯಾಗಿದೆ. ನಿರೀಕ್ಷೆಯಂತೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಇದೇ ಅರ್ಹತೆ ಮಾನದಂಡವಾಗಿತ್ತು ಎಂದು ವಿಧಾನ ಪರಿಷತ್‌ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಪಡುಪಣಂಬೂರು ಗ್ರಾ.ಪಂ.ಗೆ ಭೇಟಿ ನೀಡಿ ಅವರು ಮಾತನಾಡಿದರು. ಪಂಚಾಯತ್‌ ಅಧ್ಯಕ್ಷ ಮೋಹನ್‌ ದಾಸ್‌, ಉಪಾಧ್ಯಕ್ಷೆ ಸುರೇಖಾ ಕರುಣಾಕರ್‌ ಹಾಗೂ ಸದಸ್ಯರು ಪಂಚಾಯತ್‌ ವತಿಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಮ್ಮಾನಿಸಿದರು.

Advertisement

ಪಂಚಾಯತ್‌ ಸದಸ್ಯರಾದ ವಿನೋದ್‌ ಎಸ್‌. ಸಾಲ್ಯಾನ್‌ ಬೆಳ್ಳಾಯರು, ಕುಸುಮಾ ಚಂದ್ರಶೇಖರ್‌, ಮಂಜುಳಾ, ಸಿಬಂದಿಗಳಾದ ಶರ್ಮಿಳಾ, ಸುನೀತಾ, ದೀಪ್ತಿ, ನಮಿತಾ, ಬಬಿತಾ, ದಿನಕರ್‌, ಅಭಿಜಿತ್‌, ಹನುಮಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next