Advertisement

Padubidri ; ದ್ವಿಚಕ್ರ ವಾಹನ ಢಿಕ್ಕಿ : ವೃದ್ಧೆಗೆ ಗಂಭೀರ ಗಾಯ

12:14 AM Sep 12, 2023 | Team Udayavani |

ಪಡುಬಿದ್ರಿ: ಪಾದೆಬೆಟ್ಟು ಗ್ರಾಮದ ಅರುಣಾ ಮಸಾಲ ಕಂಪೆನಿ ಎದುರು ಸ್ಥಳೀಯ ನಿವಾಸಿ ಗುಲಾಬಿ (70) ಅವರು ಸೆ. 10ರಂದು ರಸ್ತೆಯ ಎಡಬದಿಯಲ್ಲಿ ನಡೆದು ಹೋಗುತ್ತಿದ್ದಾಗ ದ್ವಿಚಕ್ರ ವಾಹನವೊಂದು ಢಿಕ್ಕಿಯಾಗಿ ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಸ್ಕೂಟರ್‌ ಸವಾರ ಪಲಿಮಾರು ಗ್ರಾಮದ ವಿಘ್ನೇಶ್‌ ಕೂಡ ಗಾಯಗೊಂಡಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next