Advertisement

Padubidri: ಟ್ಯಾಂಕರ್‌ ಹರಿದು ಬೈಕ್‌ ಸವಾರ ಸಾವು

11:37 PM Nov 03, 2023 | Team Udayavani |

ಪಡುಬಿದ್ರಿ: ಬಸ್‌ಗೆ ಢಿಕ್ಕಿಯಾಗಿ ರಸ್ತೆಗೆ ಬಿದ್ದ ಬೈಕ್‌ ಸವಾರನ ಮೇಲೆ ಟ್ಯಾಂಕರ್‌ ಹರಿದು ಸ್ಥಳದÇÉೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಪಡುಬಿದ್ರಿ ಜಂಕ್ಷನ್‌ನಲ್ಲಿ ನಡೆದಿದೆ.

Advertisement

ಕಂಚಿನಡ್ಕ ಗುರುರಾಘವೇಂದ್ರ ಮಂದಿರ ಬಳಿ ನಿವಾಸಿ ಪ್ರಜ್ವಲ್‌ ಪೂಜಾರಿ (20) ಮೃತ ಬೈಕ್‌ ಸವಾರ. ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಮಂಗಳೂರು ಬಸ್‌ ನಿಲ್ದಾಣ ಬಳಿ ಪ್ರಯಾಣಿಕರನ್ನು ಹತ್ತಿಸಲು ನಿಂತಿದ್ದ ಬಸ್‌ಗೆ ಬೈಕ್‌ ಢಿಕ್ಕಿ ಹೊಡೆದಿದೆ. ಈ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್‌ ಯುವಕನ ಮೇಲೆ ಹರಿದಿತ್ತು. ಅದರಡಿ ಸಿಲುಕಿಕೊಂಡಿದ್ದ ಪ್ರಜ್ವಲ್‌ನನ್ನು ಸ್ಥಳೀಯರ ಸಹಕಾರದಿಂದ ಹೊರತೆಗೆಯಲಾಯಿತು. ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಜ್ಜಿಯ ಮನೆಗೆ ತೆರಳುತ್ತಿದ್ದ
ಕ್ರೇನ್‌ ಮೆಕಾನಿಕ್‌ ಆಗಿರುವ ರಮೇಶ್‌ ಪೂಜಾರಿ ಕಂಚಿನಡ್ಕ ಮತ್ತು ಶರ್ಮಿಳಾ ಪೂಜಾರ್ತಿ ಅಂಗರಗುಡ್ಡೆ ಅವರ ಪುತ್ರನಾಗಿರುವ ಪ್ರಜ್ವಲ್‌ ಎಲ್ಲೂರಿನಲ್ಲಿ ಐಟಿಐ ವಿದ್ಯಾಭ್ಯಾಸ ನಡೆಸುತ್ತಿದ್ದ. ತರಗತಿ ಮುಗಿಸಿ ಮನೆಗೆ ಆಗಮಿಸಿ ಮೂಲ್ಕಿ ಅಂಗರಗುಡ್ಡೆಯಲ್ಲಿ ಮೃತಪಟ್ಟಿರುವ ಅಜ್ಜಿಯ ಮನೆಗೆ ತೆರಳುತ್ತಿದ್ದ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next