Advertisement

Padubidri: ದತ್ತಾತ್ರೇಯ ಮಂದಿರಕ್ಕೆ ಕಳ್ಳರ ಲಗ್ಗೆ: ಲಕ್ಷ ರೂ. ಮೌಲ್ಯದ ಬೆಳ್ಳಿ ಸೊತ್ತು ಕಳವು

12:45 AM Feb 02, 2024 | Team Udayavani |

ಪಡುಬಿದ್ರಿ: ಇಲ್ಲಿನ ನಾಗರಾಜ ಎಸ್ಟೇಟ್‌ನಲ್ಲಿರುವ ದತ್ತಾತ್ರೇಯ ಮಂದಿರದ ಹಿಂಬದಿ ಬಾಗಿಲಿನಿಂದ ಒಳಬಂದು ದೇವರಕೋಣೆಯ ಬಾಗಿಲು ಮುರಿದ ಕಳ್ಳರು 1 ಲಕ್ಷ ರೂ. ಬೆಲೆಬಾಳುವ ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿರುವುದಾಗಿ ವಿಟuಲ ಶೆಟ್ಟಿ ಅವರು ಪಡುಬಿದ್ರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಎಂದಿನಂತೆ ಅಲ್ಲಿನ ಅರ್ಚಕ ಚಂದ್ರಕಾಂತ್‌ ಆಚಾರ್ಯ ಪೂಜೆಗೆಂದು ಎದುರಿನ ಹೆಬ್ಟಾಗಿಲನ್ನು ತೆರೆದು ಒಳ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಬೆಳ್ಳಿ ಮುಚ್ಚಿದ ದತ್ತ ದೇವರ ಪಾದುಕೆಗಳು, ಬೆಳ್ಳಿ ಕಟ್ಟಿದ ದೊಡ್ಡ ಶಂಖ, ಬೆಳ್ಳಿಯ ನಾಗನ ಹೆಡೆ ಮತ್ತು ಬೆಳ್ಳಿಯ ಮುದ್ರಿಕೆಗಳು ಕಳವಾದ ಸೊತ್ತುಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next