Advertisement

ಪದ್ಮಾವತಿ ಚಿತ್ರ ಬಿಕ್ಕಟ್ಟು; ಕೋಟೆ ಪ್ರವೇಶಕ್ಕೆ ತಡೆ!

11:17 AM Nov 18, 2017 | Sharanya Alva |

ಜೈಪುರ: ಬಾಲಿವುಡ್‌ ಚಿತ್ರ “ಪದ್ಮಾವತಿ’ಯ ನಿಷೇಧಕ್ಕೆ ಆಗ್ರಹಿಸುತ್ತಿರುವ ಸಂಘಟನೆಗಳು ಶುಕ್ರವಾರವೂ ತಮ್ಮ ಪ್ರತಿಭಟನೆ ಮುಂದುವರಿಸಿವೆ. ರಾಜಸ್ಥಾನದ ಸರ್ವ ಸಮಾಜ ಸಂಘಟನೆ ಹಾಗೂ ಜೌಹಾರ್‌ ಸಮಿತಿ ಸಂಸ್ಥಾನ ಸಂಘಟನೆಗಳು ಇಲ್ಲಿನ ಚಿತ್ತೋರ್‌ಗಢ ಕೋಟೆಯೊಳಕ್ಕೆ
ಪ್ರವಾಸಿಗಳು ಪ್ರವೇಶಿಸದಂತೆ ಅಡ್ಡಿಪಡಿಸಿವೆ. 

Advertisement

ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಈ ಕೋಟೆಯೊಳಗೆ ಪದ್ಮಿನಿಯ ಅರಮನೆಯೂ ಇದೆ. ಇದೇ ವೇಳೆ, ಪ್ರಮಾಣ ಪತ್ರಕ್ಕೆ ಕೋರಿ ಪದ್ಮಾವತಿ ಸಿನಿಮಾ ನಿರ್ಮಾಪಕರು ಸಲ್ಲಿ ಸಿದ್ದ ಅರ್ಜಿ ಅಪೂರ್ಣವಾಗಿದೆ ಎಂದು ಹೇಳಿರುವ ಸಿಬಿಎಫ್ಸಿ, ಸಿನಿಮಾವನ್ನು ವಾಪಸ್‌ ಕಳುಹಿಸಿದೆ.
ತಾಂತ್ರಿಕ ಸಮಸ್ಯೆ ಸರಿಪಡಿಸಿದ ಬಳಿಕ ಪ್ರಮಾಣಪತ್ರಕ್ಕೆ ಪರಿಗಣಿಸಲಾಗುವುದು ಎಂದಿದೆ ಸಿಬಿಎಫ್ಸಿ.

Advertisement

Udayavani is now on Telegram. Click here to join our channel and stay updated with the latest news.

Next