Advertisement

ಸುಧಾ ಮಂಗಲೋತ್ಸವದಂದೇ ಪದ್ಮಪ್ರಶಸ್ತಿ ಘೋಷಣೆ

12:12 AM Jan 26, 2020 | Team Udayavani |

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ನವೆಂಬರ್‌ ಕೊನೆಯ ವಾರದಲ್ಲಿ ತಮ್ಮ 39ನೆಯ ಸುಧಾಮಂಗಲೋತ್ಸವವನ್ನು ಕೋಲಾರ ಜಿಲ್ಲೆಯ ಮುಳುಬಾಗಿಲಿನ ಶ್ರೀಪಾದರಾಜರ ಸನ್ನಿಧಾನದಲ್ಲಿ ನಡೆಸುವುದಾಗಿ ನಿಶ್ಚಯಿಸಿದ್ದರು. ಇದೀಗ ಸುಧಾಮಂಗಲೋತ್ಸವ ಉದ್ಘಾಟನೆಯ ಸಮಯದಲ್ಲಿಯೇ ಶ್ರೀಪಾದರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.

Advertisement

ಸುಧಾಮಂಗಲೋತ್ಸವ ಶನಿವಾರ ಸಂಜೆ ಉದ್ಘಾಟನೆಗೊಂಡಿತು. ಪದ್ಮವಿಭೂಷಣ ಪ್ರಶಸ್ತಿ ಘೋಷಣೆಯಾಗುವಾಗ ಸಭಾ ಕಾರ್ಯಕ್ರಮ ನಡೆಯುತ್ತಿತ್ತು. ಈ ದಿನವನ್ನು ಸ್ವತ: ಶ್ರೀವಿಶ್ವೇಶತೀರ್ಥರು ನಿಗದಿಪಡಿಸಿದ್ದು ಮಾತ್ರವಲ್ಲದೆ ಮಠದ ವತಿಯಿಂದ ಅವರಾಗಿ ನಿಗದಿಪಡಿಸಿದ ಕಾರ್ಯಕ್ರಮ ಇದುವೇ ಕೊನೆಯದ್ದು. ಎರಡು ಗೌರವ ಡಾಕ್ಟರೇಟ್‌ ಪದವಿ ಅವರಿಗೆ ಸಿಕ್ಕಿದ್ದರೂ ಡಾ|ಎಂದು ಹಾಕಿಕೊಳ್ಳದ ಶ್ರೀಪಾದರಿಗೆ ಈಗ ಪದ್ಮವಿಭೂಷಣ ಪ್ರಶಸ್ತಿ ದೊರಕಿದೆ.

ಪ್ರಥಮ ರಾಷ್ಟ್ರಪತಿ ಬಾಬುರಾಜೇಂದ್ರ ಪ್ರಸಾದರ ಸಂಪರ್ಕ ಹೊಂದಿದ್ದ ಶ್ರೀಪಾದರಿಗೆ ಈಗಿನ 14ನೆಯ ರಾಷ್ಟ್ರಪತಿ ರಾಮನಾಥ ಕೋವಿಂದರು ಉಡುಪಿಗೆ ಬಂದು 2018ರ ಡಿ. 27ರಂದು ಗೌರವಿಸಿದ್ದರು. ಇದೀಗ ಕೋವಿಂದರೇ ಶ್ರೀಪಾದರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡುವ ಯೋಗ ಕೂಡಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next