– ಆಹಾರ, ಆರೋಗ್ಯ, ಇಂಧನ ಸಬ್ಸಿಡಿಗೆ ಕತ್ತರಿ?
Advertisement
ಹೊಸದಿಲ್ಲಿ: ನಿರುದ್ಯೋಗಿ ಯುವ ಸಮುದಾಯವನ್ನು ಓಲೈಸಲು ಮುಂದಾಗಿರುವ ಕೇಂದ್ರ ಸರಕಾರ, ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿಗಳಿಗೆ ವಾರ್ಷಿಕ 5,000 ರೂ. ನಿರುದ್ಯೋಗ ಭತ್ತೆ ನೀಡುವ ಕುರಿತು ಗಂಭೀರ ಚಿಂತನೆಯಲ್ಲಿ ಮುಳುಗಿದೆ.
ಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು ಕಡಿತ ಗೊಳಿಸುವ ಸಂಭವವಿದೆ. ಇದು ರಾಜಕೀಯ ಜಟಾಪಟಿಗೂ ನಾಂದಿ ಹಾಡಬಹುದು ಎಂದು ಮೂಲಗಳು ತಿಳಿಸಿವೆ. ಕೇರಳ, ಮಧ್ಯಪ್ರದೇಶ, ಹರಿಯಾಣ, ಛತ್ತೀಸ್ಗಢ ಹಾಗೂ ಪಂಜಾಬ್ನಂತಹ ಕೆಲ ರಾಜ್ಯಗಳು ನಿರುದ್ಯೋಗಿಗಳಿಗೆ ಭತ್ತೆ ನೀಡುವ ಯೋಜನೆಯನ್ನು ಹೊಂದಿವೆ. ಆದರೆ ಇಂತಹ ಒಂದು ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತರುತ್ತಿರುವುದು ಇದೇ ಮೊದಲು.
Related Articles
Advertisement
ನಿರುದ್ಯೋಗ ಭತ್ತೆ ಬದಲಿಗೆ ಏಕರೂಪದ ಕನಿಷ್ಠ ಆದಾಯ ಯೋಜನೆಯನ್ನು ಕೆಲವು ದೇಶಗಳು ಪರಿಶೀಲಿಸುತ್ತಿವೆ. ಆದರೆ ಸಂಪನ್ಮೂಲದ ಕೊರತೆಯಿಂದಾಗಿ ಕೇಂದ್ರ ಸರಕಾರ ಅದರ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಒಂದು ವೇಳೆ ಅಂಥದ್ದೊಂದು ಯೋಜನೆ ಜಾರಿಗೆ ತಂದರೂ ಜಿಡಿಪಿಯ ಶೇ.12.5ರಷ್ಟು ಪಾಲನ್ನು ಆ ಕಾರ್ಯಕ್ರಮಕ್ಕೇ ಮೀಸಲಿಡಬೇಕಾಗುತ್ತದೆ. ಆದರೆ ಅದು ಸಾಧ್ಯವಿಲ್ಲದ ಮಾತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.