Advertisement

ಪಿ.ವಾಸು –ಶಿವರಾಜಕುಮಾರ್‌ ಹೊಸ ಚಿತ್ರ ಆನಂದ್‌?

11:37 AM Oct 03, 2018 | |

ಶಿವರಾಜಕುಮಾರ್‌ ಹಾಗೂ ನಿರ್ದೇಶಕ ಪಿ.ವಾಸು ಕಾಂಬಿನೇಶನ್‌ನಲ್ಲಿ ಬಂದ “ಶಿವಲಿಂಗ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತು. ಶಿವರಾಜಕುಮಾರ್‌ ಅವರಿಗೂ ಈ ಚಿತ್ರ ಹೊಸ ಇಮೇಜ್‌ ಕೊಟ್ಟಿದ್ದು ಸುಳ್ಳಲ್ಲ. ಆ ಚಿತ್ರದ ಬಿಡುಗಡೆ ಸಮಯದಲ್ಲೇ ತಾವಿಬ್ಬರು ಮತ್ತೂಂದು ಚಿತ್ರ ಮಾಡುವುದಾಗಿ ಶಿವಣ್ಣ ಹೇಳಿದ್ದರು. ಈಗ ಬಹುತೇಕ ಎಲ್ಲವೂ ಅಂತಿಮವಾಗಿದ್ದು, ಶಿವಣ್ಣ ಹಾಗೂ ಪಿ.ವಾಸು ಕಾಂಬಿನೇಶನ್‌ನಲ್ಲಿ ಮತ್ತೂಂದು ಸಿನಿಮಾ ಬರಲಿದೆ.

Advertisement

ಎಲ್ಲಾ ಓಕೆ, ಈ ಸಿನಿಮಾದ ಶೀರ್ಷಿಕೆ ಏನು ಎಂಬ ಕುತೂಹಲ ಸಹಜ. ಚಿತ್ರಕ್ಕೆ “ಆನಂದ್‌’ ಎಂದು ಹೆಸರಿಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ “ಆನಂದ್‌’ ಶಿವರಾಜಕುಮಾರ್‌ ಅವರ ಮೊದಲ ಚಿತ್ರ. ಸಿಂಗೀತಂ ಶ್ರೀನಿವಾಸ್‌ ರಾವ್‌ ನಿರ್ದೇಶನದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗುವ ಮೂಲಕ ಶಿವರಾಜಕುಮಾರ್‌ ಕೆರಿಯರ್‌ಗೆ ಭದ್ರ ಬುನಾದಿಯಾಯಿತು.

ಈಗ ಮತ್ತೂಮ್ಮೆ ಈ ಟೈಟಲ್‌ನಡಿ ಸಿನಿಮಾ ಮಾಡುವ ತಯಾರಿ ನಡೆಯುತ್ತಿದೆ. ಹಾಗಂತ ಚಿತ್ರತಂಡ “ಆನಂದ್‌’ ಶೀರ್ಷಿಕೆಯನ್ನೇ ಅಂತಿಮಗೊಳಿಸಿಲ್ಲ. ಇದರ ಜೊತೆಗೆ “ಅಮರೇಂದ್ರ’ ಎಂಬ ಶೀರ್ಷಿಕೆಯೂ ಇದೆ. “ಆನಂದ್‌’ ಹಾಗೂ “ಅಮರೇಂದ್ರ’ದಲ್ಲಿ ಯಾವುದು ಕಥೆಗೆ ಹಾಗೂ ತಂಡಕ್ಕೆ ಓಕೆಯಾಗುತ್ತದೋ ಅದನ್ನು ಅಂತಿಮಗೊಳಿಸಲಿದೆ. 

ಈ ನಡುವೆಯೇ ಶಿವರಾಜಕುಮಾರ್‌ ಹಾಗೂ ಯೋಗರಾಜ ಭಟ್ಟರ ಕಾಂಬಿನೇಶನ್‌ನಲ್ಲೊಂದು ಸಿನಿಮಾ ಬರಲಿದ್ದು, ಈ ಚಿತ್ರಕ್ಕೆ “ಕುಲದಲ್ಲಿ ಕೀಳ್ಯಾವುದೋ’ ಎಂದು ಶೀರ್ಷಿಕೆ ಇಡಲಾಗಿದೆ. “ಭಟ್ರ ಕಥೆ ತುಂಬಾ ಚೆನ್ನಾಗಿದೆ. ಆ ಕಥೆ ಕೇಳಿ ನಾನು ತುಂಬಾ ಇಂಪ್ರಸ್‌ ಆದೆ. ಆ ಕಥೆಗೆ ಟೈಟಲ್‌ ತುಂಬಾ ಹೊಂದುತ್ತೆ’ ಎನ್ನುತ್ತಾರೆ ಶಿವರಾಜಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next