Advertisement

ಜನ್ಮದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ ; ಅಚ್ಚರಿ ವ್ಯಕ್ತಪಡಿಸಿದ ಚಿದು

09:51 AM Sep 25, 2019 | Team Udayavani |

ನವದೆಹಲಿ: ತನ್ನ ಜನ್ಮದಿನಕ್ಕೆ ತಮಿಳಿನಲ್ಲಿ ಶುಭಾಶಯ ಸಂದೇಶ ಕಳುಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಸದ್ಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ಮಾಜೀ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಇಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಚ್ಚರಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Advertisement

ತಮಿಳುನಾಡಿನ ಶಿವಗಂಗಾದಲ್ಲಿರುವ ಚಿದಂಬಂರಂ ಅವರ ಮನೆ ವಿಳಾಸಕ್ಕೆ ಬಂದಿರುವ ಈ ಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಿ. ಚಿದಂಬಂರಂ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ‘ನಿಮ್ಮ ಜನ್ಮದಿನದಂದು ಹೃದಯಾಂತರಾಳದ ಶುಭಾಶಯಗಳನ್ನು ನಾನು ನಿಮಗೆ ತಿಳಿಸುತ್ತಿದ್ದೇನೆ. ಆ ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಒದಗಿಸಲಿ ಹಾಗೂ ನೀವು ಸದಾ ಜನರ ಸೇವೆಯನ್ನು ಮಾಡಿಕೊಂಡಿರುವಂತೆ ದೇವರು ನಿಮ್ಮನ್ನು ಹರಸಲಿ’ ಎಂದು ಮೋದಿ ಅವರು ತಮಿಳು ಭಾಷೆಯಲ್ಲಿ ಕಳುಹಿಸಿರುವ ಸಂದೇಶದಲ್ಲಿ ತಮ್ಮ ಶುಭಕಾಮನೆಗಳನ್ನು ತಿಳಿಸಿದ್ದಾರೆ. ಚಿದಂಬಂರಂ ಅವರು ಸೆಪ್ಟಂಬರ್ 16ರಂದು 74ನೇ ವರ್ಷಕ್ಕೆ ಕಾಲಿರಿಸಿದ್ದರು.


ಪ್ರಧಾನಿ ಮೋದಿ ಅವರ ಈ ಅಭಿನಂದನೆಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಚಿದಂಬಂರಂ ಅವರು , ‘ಮೋದಿ ಅವರ ಆಶಯದಂತೆ ನಾನು ಜನರ ಸೇವೆ ಮಾಡಲು ಉತ್ಸುಕನಾಗಿದ್ದೇನೆ. ಆದರೆ ದುರದೃಷ್ಟವಶಾತ್, ಮೋದಿ ಸರಕಾರದ ತನಿಖಾ ಸಂಸ್ಥೆಗಳೇ ತನ್ನನ್ನು ಜನ ಸೇವೆ ಮಾಡುವಲ್ಲಿ ಅಡ್ಡಿಪಡಿಸುತ್ತಿವೆ’ ಎಂದು ಬರದುಕೊಂಡಿದ್ದಾರೆ.

‘ಈ ಹಿಂಸೆ ಮುಕ್ತಾಯಗೊಂಡ ಬಳಿಕ, ಮೋದಿ ಅವರ ಆಶಯದಂತೆ ನಾನು ಜನರ ಸೇವೆ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಚಿದಂಬಂರಂ ಅವರು ತಮಿಳಿನಲ್ಲಿ ಬರೆದುಕೊಂಡಿದ್ದಾರೆ.

ಮಾಜೀ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬಂರಂ ಅವರು ಐ.ಎನ್.ಎಕ್ಸ್. ಮೀಡಿಯಾ ಹಗರಣ ಪ್ರಕರಣದಲ್ಲಿ ಆರೋಪಿಯಾಗಿದ್ದು ಸದ್ಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next