Advertisement

ಆಕ್ಸ್‌ಫ‌ರ್ಡ್‌ ಲಸಿಕೆ ಭಾರತಕ್ಕೆ?

03:41 AM Jul 22, 2020 | Hari Prasad |

ಹೊಸದಿಲ್ಲಿ: ಪ್ರಾಯೋಗಿಕ ಹಂತದಲ್ಲೇ ಉತ್ತಮ ಫ‌ಲಿತಾಂಶ ದಾಖಲಿಸಿರುವ, ಆಕ್ಸ್‌ಫ‌ರ್ಡ್‌ ವಿವಿ ಸಂಶೋಧಕರು ಅಭಿವೃದ್ಧಿಪಡಿಸಿರುವ ‘ಎಝಡ್‌ಡಿ 1222’ ಎಂಬ ಕೋವಿಡ್ 19 ಲಸಿಕೆಯು ಈಗಾಗಲೇ ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ ನಿರೀಕ್ಷೆಗೂ ಹೆಚ್ಚು ಫ‌ಲಿತಾಂಶ ನೀಡಿದೆ.

Advertisement

ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಇದರ ಪ್ರಾಯೋಗಿಕ ಪರೀಕ್ಷೆಗೆ ವೇದಿಕೆ ಕಲ್ಪಿಸಲು ಪ್ರಯತ್ನಗಳು ಆರಂಭವಾಗಿವೆ.
ಸೆರಮ್‌ ಇನ್ಸ್ಟಿಟ್ಯೂಟ್‌ ಸಂಸ್ಥೆ ಲಸಿಕೆಯನ್ನು ಭಾರತಕ್ಕೆ ಪರಿಚಯಿಸಲು ಉತ್ಸುಕವಾಗಿದೆ. ಹಾಗಾಗಿ, ಅದನ್ನು ತಯಾರಿಸಲು ಅನುಮತಿ ಪಡೆದಿರುವ ಬ್ರಿಟನ್‌ನ ಆ್ಯಸ್ಟ್ರಾ ಝೆನಿಕಾ ಸಂಸ್ಥೆಯಿಂದ ತಾನು ಲಸಿಕೆಗಳನ್ನು ಪಡೆಯಲು ನಿರ್ಧರಿಸಿರುವ ಸೆರಮ್‌ ಸಂಸ್ಥೆ, ಇದಕ್ಕಾಗಿ ಒಪ್ಪಿಗೆ ನೀಡುವಂತೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯಕ್ಕೆ (ಡಿಸಿಜಿಐ) ಮನವಿ ಸಲ್ಲಿಸಿದೆ. ಅನುಮತಿ ಸಿಕ್ಕಿದರೆ ಮುಂದಿನ ತಿಂಗಳಿಂದ ಕ್ಲಿನಿಕಲ್‌ ಟ್ರಯಲ್‌ ಶುರುವಾಗುವ ಸಾಧ್ಯತೆ ಇದೆ.

ಶೇ.5ಕ್ಕಿಳಿಸುವುದೇ ಗುರಿ: 19 ರಾಜ್ಯಗಳು- ಕೇಂದ್ರಾಡಳಿತ ಪ್ರದೇಶಗಳು ಪ್ರತಿ 10 ಲಕ್ಷ ಜನಸಂಖ್ಯೆಗೆ ದಿನಕ್ಕೆ 140 ಸ್ಯಾಂಪಲ್‌ಗ‌ಳಿಗಿಂತಲೂ ಹೆಚ್ಚಿನ ಪರೀಕ್ಷೆ ನಡೆಸುತ್ತಿವೆ. ಪರೀಕ್ಷೆ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುವಂತೆ ನೋಡಿಕೊಳ್ಳಬೇಕು. ಅದು ಶೇ.5 ಅಥವಾ ಅದಕ್ಕಿಂತ ಕೆಳಮಟ್ಟಕ್ಕೆ ಇಳಿಯಬೇಕು. ಈ ಮಟ್ಟಕ್ಕೆ ಇಳಿಸುವುದೇ ನಮ್ಮ ಗುರಿ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಮರಣ ಪ್ರಮಾಣ ಇಳಿಕೆಯಾಗಿದ್ದು, ಜೂ.17ರಂದು ಶೇ.3.36ರಷ್ಟಿದ್ದ ಮರಣ ಪ್ರಮಾಣ ಈಗ ಶೇ.2.43ಕ್ಕಿಳಿದಿದೆ ಎಂದಿದೆ.

ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ ದೇಶದಲ್ಲಿ 37,148 ಮಂದಿಗೆ ಸೋಂಕು ದೃಢಪಟ್ಟಿದ್ದು, 587 ಮಂದಿ ಸಾವಿಗೀಡಾಗಿದ್ದಾರೆ. 7.24 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ.
ಶೇ.24 ಮಂದಿ ಬಾಧಿತರು: ದಿಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.24 ಮಂದಿ ಕೋವಿಡ್ 19ಗೆ ಬಾಧಿತರಾಗಿದ್ದಾರೆ ಎಂದು ಸೆರೊ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಶೇ.23.48 ಮಂದಿ ಮಾತ್ರ ಕೋವಿಡ್ 19ಗೆ ಬಾಧಿತರಾಗಿದ್ದಾರೆ. ಇದರಲ್ಲಿ ಹೆಚ್ಚಿನವರು ಸೋಂಕುರಹಿತ ಲಕ್ಷಣ ಹೊಂದಿದ್ದಾರೆ. ಆದಾಗ್ಯೂ ಜನಸಂಖ್ಯೆಯ ಗಮನಾರ್ಹ ಪ್ರಮಾಣ ಇನ್ನೂ ದುರ್ಬಲವಾಗಿದೆ ಎಂದು ಸೆರೊ ಎಚ್ಚರಿಸಿದೆ.

ಪ್ರಯೋಗ ಹಂತಕ್ಕೆ 2 ಭಾರತೀಯ ಲಸಿಕೆ
ಭಾರತದಲ್ಲಿ ಎರಡು ಲಸಿಕೆಗಳು ಮೊದಲ ಮತ್ತು 2ನೇ ಹಂತದ ಪ್ರಯೋಗ ಪ್ರಕ್ರಿಯೆಯಲ್ಲಿದ್ದು, ಅವುಗಳನ್ನು ಅಗತ್ಯವಿರುವವರಿಗೆ ಲಭ್ಯವಾಗಿಸುವುದು ಹೇಗೆ ಎಂಬ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ನೀತಿ ಆಯೋಗ ತಿಳಿಸಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಭಾರತೀಯರಿಗೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಲಸಿಕೆ ಲಭ್ಯವಾಗುವಂತೆ ಮಾಡಲು ಸರಕಾರ ಪ್ರಯತ್ನ ನಡೆಸುತ್ತಿದೆ. ಪ್ರಯೋಗವು ವೈಜ್ಞಾನಿಕವಾಗಿ ಮತ್ತು ನೈತಿಕವಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆಯೋಗ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next