Advertisement

ಮೃತಪಟ್ಟ ಕೊಬ್ಬರಿ ಹೋರಿಗೆ ಕಂಬನಿ

07:00 PM Feb 09, 2021 | Team Udayavani |

ರಾಣಿಬೆನ್ನೂರ: ರಾಜ್ಯದಲ್ಲಿಯೇ ಹೋರಿ ಹಬ್ಬದ ಸ್ಪರ್ಧೆಗೆ ಹೆಸರಾಗಿದ್ದ “ರಾಣಿಬೆನ್ನೂರು ಕಾ ಹುಲಿರಾಜ’ ಎಂಬ ಹೆಸರಿನ ಕೊಬ್ಬರಿ ಹೋರಿ ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದು ಸಾಕಿದವರು  ಸೇರಿದಂತೆ ನಗರದ ಜನತೆ ಕಂಬನಿ ಮಿಡಿದಿದ್ದಾರೆ.

Advertisement

ನಗರದ ಕುರುಬಗೇರಿ ನಿವಾಸಿ ದೇವಮರಿಯಪ್ಪ ಗುದಿಗೇರ ಎಂಬವರಿಗೆ ಸೇರಿದ ಹೋರಿ ರಾಜ್ಯ ಸೇರಿದಂತೆ ಹೊರ ರಾಜ್ಯದಲ್ಲಿಯೂ ಹೆಸರು ಮಾಡಿತ್ತು. ಈ ಹೋರಿ ಸುಮಾರು 17 ವರ್ಷದಿಂದ ವಿವಿಧೆಡೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿತ್ತು. ಈ ಹೋರಿ ನೋಡುವ ಸಲುವಾಗಿ ಜನರು ನಗರಕ್ಕೆ ಬರುತ್ತಿದ್ದರು.

ಇದನ್ನು ಓದಿ :ಆನ್ ಲೈನ್ ಡೇಟಾ ಸುರಕ್ಷತೆಗೆ ಯಾವೆಲ್ಲಾ ಕ್ರಮ ಅನುಸರಿಸಬಹುದು ? ಇಲ್ಲಿದೆ ಸರಳ ಉಪಾಯ

ಬಹುಮಾನ ಪಡೆದ ಹೋರಿ: ರಾಣಿಬೆನ್ನೂರು ಹುಲಿ ಹೋರಿ ವಿವಿಧೆಡೆ ನಡೆದ ಸ್ಪರ್ಧೆಗಳಲ್ಲಿ 25 ತೊಲೆ ಬಂಗಾರ, ಒಂದು ಕೆ.ಜಿ. ಬೆಳ್ಳಿ, 17 ಬೈಕ್‌, ಎರಡು ಚಕ್ಕಡಿ, ಎರಡು ಎತ್ತಿನ ಬಂಡಿ,  25 ಗಾಡ್ರೇಜ್‌, 10 ಟಿ.ವಿ ಬಹುಮಾನವಾಗಿ ಪಡೆದಿತ್ತು

Advertisement

Udayavani is now on Telegram. Click here to join our channel and stay updated with the latest news.

Next