Advertisement

ಮಧ್ಯಪ್ರದೇಶದ 16 ಲಕ್ಷ ರೈತರಿಗೆ ಭಾವಾಂತರ್‌ ಯೋಜನೆ ಲಾಭ

03:44 PM Oct 25, 2017 | Team Udayavani |

ಭೋಪಾಲ್‌ : ರೈತರ ಉತ್ಪನ್ನಗಳಿಗೆ  ಮಾದರಿ ಬೆಲೆಯನ್ನು ನಿಗದಿಸಿ ಆ ಹಣವನ್ನು ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡುವ ಮಧ್ಯಪ್ರದೇಶದ “ಭಾವಾಂತರ್‌’ ಯೋಜನೆ’ಯ ಲಾಭವನ್ನು ಮಧ್ಯಪ್ರದೇಶದ 16 ಲಕ್ಷಕ್ಕೂ ಅಧಿಕ ರೈತರು ಪಡೆಯಲಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. 

Advertisement

ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆಯನ್ನು ನಿಗದಿಸಿ ಆ ಹಣವನ್ನು ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡುವ ಮಧ್ಯಪ್ರದೇಶ ಸರಕಾರದ ಯೋಜನೆಗೆ “ಭಾವಾಂತರ್‌’ ಎಂದು ಹೆಸರಿಡಲಾಗಿದೆ. 

ಈ ಯೋಜನೆಯಡಿ ಸರಕಾರ ನಿಗದಿಸುವ ಮಾರುಕಟ್ಟೆ ಧಾರಣೆ ಮತ್ತು ಕನಿಷ್ಠ ಬೆಂಬಲ ಬೆಲೆ ನಡುವಿನ ಅಂತರವನ್ನು “ಮಾದರಿ ಬೆಲೆ’ ಎಂದು ಕರೆಯಲಾಗುತ್ತದೆ. ಇದನ್ನು ಸರಕಾರವು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮೆ ಮಾಡುತ್ತದೆ.

ಹದಿನಾರು ಲಕ್ಷಕ್ಕೂ ಅಧಿಕ ರೈತರು ಈಗಾಗಲೇ ಈ “ಭಾವಾಂತರ್‌’ ಯೋಜನೆಗೆ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಈ ವಿಶಿಷ್ಟ ಯೋಜನೆಯನ್ನು ಮಧ್ಯಪ್ರದೇಶ ಸರಕಾರ ಜಾರಿ ಮಾಡುತ್ತಿದೆ. 

ಡಿ.31ರಂದು ಸ್ಥಳೀಯ ಮಾರುಕಟ್ಟೆಗಳಲ್ಲಿ (ಮಂಡಿಗಳಲ್ಲಿ) ಮಾರಾಟ ಕಿಂಡಿ ಮುಚ್ಚಲ್ಪಟ್ಟಾಗ ಸರಕಾರ ಅಂದೇ ಮಾದರಿ ಬೆಲೆಯನ್ನು ಘೋಷಿಸುತ್ತದೆ ಎಂದು ಅಧಿಕಾರಿ ತಿಳಿಸಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next