Advertisement

3 ತಿಂಗಳಲ್ಲಿ 12 ಸಾವಿರಕ್ಕೂ ಅಧಿಕ ಜಾಬ್‌ ಕಾರ್ಡ್‌ ವಿತರಣೆ

07:03 PM Dec 22, 2021 | Team Udayavani |

ಕಾರ್ಕಳ: ಹಳ್ಳಿಗಳಲ್ಲಿ ಸವಲತ್ತು ಒದಗಿಸುವ ತಳಮಟ್ಟದ ಸರಕಾರವೇ ಗ್ರಾ.ಪಂ.ಗಳು. ಈ ಹಂತದಲ್ಲಿ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿ, ಹಳ್ಳಿ ಜನರನ್ನು ತಲುಪಿ ಆರ್ಥಿಕ, ಸ್ವಾವಲಂಬಿಯಾಗಿಸಲು ಕಾರ್ಕಳ ತಾಲೂಕಿನಲ್ಲಿ ಜನಜಾಗೃತಿ ನಡೆಯುತ್ತಿದೆ. 3 ತಿಂಗಳಲ್ಲಿ 12 ಸಾವಿರಕ್ಕೂ ಅಧಿಕ ಜಾಬ್‌ ಕಾರ್ಡ್‌ ವಿತರಣೆ ತಾಲೂಕಿನಲ್ಲಿ ನಡೆದಿದೆ.

Advertisement

ತಾಲೂಕಿನ 27 ಗ್ರಾ.ಪಂ.ಗಳಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿ.ಪಂ. ಮಾರ್ಗ ದರ್ಶನದಲ್ಲಿ ತಾ.ಪಂ. ವತಿಯಿಂದ ಪ್ರತೀ ಗ್ರಾ.ಪಂ. ಅಧಿಕಾರಿ, ಸಿಬಂದಿ ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು ಮೇಲ್ವಿಚಾರಣ ಹಂತದ ಅಧಿಕಾರಿಗಳ ಸಮನ್ವಯದಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಡೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಗ್ರಾಮ ಮಟ್ಟದಲ್ಲಿ ಅತ್ಯಂತ ಪರಿಣಾಮ ಕಾರಿಯಾಗಿ ಅನುಷ್ಠಾನ ಮಾಡುವ ಸದುದ್ದೇಶದಿಂದ ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನದ ಮೂಲಕ ಮಾಹಿತಿ ನೀಡಲು ಕಾರ್ಕಳ ತಾ.ಪಂ. 12 ಸಾವಿರ ನರೇಗಾ ಮಾಹಿತಿ ಮತ್ತು ಅರ್ಜಿ ನಮೂನೆ ಕರಪತ್ರ ಸಿದ್ಧಪಡಿಸಿ, ಮನೆಗಳಿಗೆ ತಲುಪಿಸಿ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.

2020-21ನೇ ಸಾಲಿನಲ್ಲಿ ಎಪ್ರಿಲ್‌ 1ರಿಂದ ಡಿಸೆಂಬರ್‌ 16ರ ವರೆಗೆ 61,051 ಮಾನವ ದಿನಗಳ ಸೃಜನೆಯಾಗಿದ್ದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ 92,775 ಮಾನವ ದಿನಗಳ ಸೃಜನೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 31,724 ಮಾನವ ದಿನಗಳು ಹೆಚ್ಚುವರಿಯಾಗಿ ಸೃಜಿಸಲಾಗಿದೆ. ಮಾರ್ಚ್‌ ಅಂತ್ಯಕ್ಕೆ ನಿಗದಿತ ವಾರ್ಷಿಕ ಗುರಿಯನ್ನು ಪೂರ್ಣಗೊಳಿಸುವ ಪ್ರಯತ್ನ ತಾಲೂಕಿನಲ್ಲಿ ನಡೆಯುತ್ತಿದೆ.

ಕೃಷಿ ನೀರಾವರಿ ಬಾವಿ, ದನದ ಹಟ್ಟಿ, ಕೋಳಿಶೆಡ್‌, ಗೊಬ್ಬರ ಗುಂಡಿ, ಎರೆಹುಳು ತೊಟ್ಟಿ, ಹಂದಿ ಶೆಡ್‌, ಮಲ್ಲಿಗೆ ಕೃಷಿ, ಅಡಿಕೆ, ತೆಂಗು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆ ಸೇರಿದಂತೆ 1,470 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಕಳೆದ ಸಾಲಿಗಿಂತ 832 ಹೆಚ್ಚು ಕಾಮಗಾರಿಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ಅವರ ನೂತನ ಮಿಷನ್‌ 25 ಅಭಿಯಾನದಡಿ ಕನಿಷ್ಠ 675 ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವ ಗುರಿ ಸಾಧನೆಗೆ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ.

Advertisement

ಸೆ.3ರಂದು ಗ್ರಾಮೀಣ ಪ್ರದೇಶದ ಎಲ್ಲ ಅರ್ಹ ನಾಗರಿಕರಿಗೆ ಉದ್ಯೋಗ ಚೀಟಿ ನೀಡುವ ಸದುದ್ದೇಶದೊಂದಿಗೆ ಜಾಬ್‌ಕಾರ್ಡ್‌ ಮೇಳ ಅಭಿಯಾನ ಆರಂಭಿಸಲಾಗಿತ್ತು. 14,330 ಜಾಬ್‌ಕಾರ್ಡ್‌ ಹೊಂದಿದ್ದ ಕುಟುಂಬಗಳ ಸಂಖ್ಯೆಯನ್ನು ಕೇವಲ 3 ತಿಂಗಳುಗಳ ಅವಧಿಯಲ್ಲಿ 26,391ಕ್ಕೆ ಏರಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ 12,061 ಕುಟುಂಬಗಳಿಗೆ ಜಾಬ್‌ಕಾರ್ಡ್‌ಗಳನ್ನು ಗ್ರಾ.ಪಂ. ಸಿಬಂದಿ, ಚುನಾಯಿತ ಪ್ರತಿನಿಧಿಗಳು, ಜಿಪಿಎಲ್‌ಎಫ್, ಸ್ವಸಹಾಯ ಸಂಘ, ಎಲ್‌.ಸಿ.ಆರ್‌.ಪಿ., ಎಂ.ಬಿ.ಕೆ. ಅವರ ಸಹಕಾರದಿಂದ ನೀಡಿದೆ. 2021ರಲ್ಲಿ 869 ಸಂಜೀವಿನಿ ಸ್ವಸಹಾಯ ಸಂಘಗಳಿವೆ. ಇದರಲ್ಲಿ 739 ಮಹಿಳೆಯರು 284 ಪ.ಪಂಗಡ 10,262, ಇತರ ವರ್ಗದ ಮಹಿಳೆಯರು ಸದಸ್ಯರಾ ಗಿರುವರು. ತಾ.ಪಂ. ಮಿಷನ್‌ 50 ಅಭಿಯಾನವನ್ನು ಕಾರ್ಕಳದಲ್ಲಿ ಜಾರಿಗೆ ತಂದ ಬಳಿಕ ಹೊಸದಾಗಿ 76 ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. 76 ಪ. ಜಾತಿ ಮಹಿಳೆಯರು, 107 ಪ. ಪಂಗಡದ ಮಹಿಳೆಯರು, 653 ಇತರ ವರ್ಗದ ಮಹಿಳೆಯರು ಸಂಘಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಸ್ವಸಹಾಯ ಸಂಘಗಳಿಗೆ ನರೇಗಾ ಯೋಜನೆಯ ಅನುಷ್ಠಾನದ ಬಗ್ಗೆ ಸಮಗ್ರ ಮಾಹಿತಿ ನೀಡಲು ಪಿಡಿಒ ಅವರಿಗೆ ಕಾಲಕಾಲಕ್ಕೆ ಸೂಚನೆ ನೀಡುತ್ತಾ ಬರಲಾಗಿದೆ. ಫ‌ಲವಾಗಿ 287 ಮಂದಿ ಮಹಿಳೆಯರು 292 ಕಾಮಗಾರಿಗಳಿಗೆ ಬೇಡಿಕೆ ಇರಿಸಿದ್ದಾರೆ. ಗರಿಷ್ಠ ಪ್ರಮಾಣ
ದಲ್ಲಿ ಸ್ವಸಹಾಯ ಸಂಘದ ಸದಸ್ಯರನ್ನು ನರೇಗಾ ಯೋಜನೆಯಲ್ಲಿ ಭಾಗೀ ದಾರರಾಗುವಂತೆ ಮಾಡುವ ದೂರದೃಷ್ಟಿಯ ಪ್ರಯತ್ನ ಸಫ‌ಲತೆ ಕಾಣುತ್ತಿದೆ.

ಯಾಕೆ ಆಸಕ್ತಿ?
ಲಾಕ್‌ಡೌನ್‌ ಬಳಿಕ ಹೊರ ಜಿಲ್ಲೆ, ರಾಜ್ಯಗಳ ಮಂದಿ ಊರಿಗೆ ಆಗಮಿಸಿ ಸ್ವ ಉದ್ಯೋಗದ ಕಡೆಗೆ ಆಸಕ್ತಿ ವಹಿಸುತ್ತಿದ್ದಾರೆ. ಅವರ ಆಸಕ್ತಿ ಗಮನಿಸಿ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಯೋಜನೆ ಯಲ್ಲಿ ಏನೆಲ್ಲ ಅವಕಾಶವಿದೆ ಎನ್ನುವ ಮಾಹಿತಿಯನ್ನು ನೀಡುತ್ತಿರುವು ದರ ಪರಿಣಾಮ ಹೆಚ್ಚು ಮಂದಿ ಯೋಜನೆಯನ್ನು ಬಳಸಿಕೊಳ್ಳುವ ಕಡೆ ಆಸಕ್ತಿ ವಹಿಸುತ್ತಿದ್ದಾರೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಸಾರ್ವಜನಿಕರಲ್ಲಿ ಜಾಗೃತಿ
ಹಿಂದೆಲ್ಲ ವರ್ಷಕ್ಕೆ ಒಂದೇ ಸೌಲಭ್ಯ ಸಿಗುವುದು ಎನ್ನುವ ಕಲ್ಪನೆ ಜನರಲ್ಲಿತ್ತು. ಈಗ ವರ್ಷಕ್ಕೆ 2-3 ಯೋಜ ನೆಗಳನ್ನು ಪಡೆದುಕೊಂಡು ಹೆಚ್ಚು ಲಾಭ ಗಳಿಸಲು ಸಾಧ್ಯ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ತಿಳಿ ಹೇಳುವ ಪ್ರಯತ್ನ ಗ್ರಾ.ಪಂ. ಮಟ್ಟದಲ್ಲಿ ಕರಪತ್ರ, ಕಾರ್ಯಾಗಾರಗಳ ಮೂಲಕ ನಡೆಸುತ್ತಿದ್ದೇವೆ.
-ಗುರುದತ್ತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಾ.ಪಂ. ಕಾರ್ಕಳ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next