Advertisement

ಜಲಸಂಪನ್ಮೂಲ ಸಚಿವ ಕಾರಜೋಳ ಹೇಳಿಕೆಗೆ ಆಕ್ರೋಶ

06:50 PM Sep 17, 2022 | Team Udayavani |

ಬೀದರ: ಕಾರಂಜಾ ಸಂತ್ರಸ್ತರಿಗೆ ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ ಖಂಡಿಸಿ ನಗರದಲ್ಲಿ ಕಾರಂಜಾ ಸಂತ್ರಸ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ನಗರದಲ್ಲಿ ಕಳೆದ 78 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂತ್ರಸ್ತರು ಡಿಸಿ ಕಚೇರಿವರೆಗೆ ರ್ಯಾಲಿ ನಡೆಸಿ ಡಿಸಿ ಗೋವಿಂದರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಕಾರಂಜಾ ಸಂತ್ರಸ್ತರಿಗೆ ಕಾನೂನಿನ ಅಡಿಯಲ್ಲಿ ಪರಿಹಾರ ಕೊಡಲು ಬರುವುದಿಲ್ಲ. 25 ವರ್ಷಗಳು ಕಳೆದ ನಂತರ ಈಗ ಪರಿಹಾರ ಕೊಡುವುದು ಸಾಧ್ಯವಿಲ್ಲ ಎಂದು ಸಚಿವ ಕಾರಜೋಳ ನೀಡಿರುವ ಹೇಳಿಕೆ ಖಂಡನೀಯ ಎಂದು ಕಿಡಿಕಾರಿದರು.

ನಾಗಶೆಟ್ಟಿ, ಪ್ರೇಮದಾಸ, ಫರಿದಸಾಬ್‌, ವಿಜಯಕುಮಾರ, ರಾಜಶೇಖರ, ಮಡಿವಾಳಪ್ಪಾ, ಅಣ್ಣೆಪ್ಪಾ, ಸುಧಾಕರ, ಗುಡುಸಾಬ್‌, ಸೂರ್ಯಕಾಂತ, ಮಾದಪ್ಪಾ, ಲಕ್ಷ್ಮೀಬಾಯಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next