Advertisement

Hyderabad: ಅಯ್ಯಪ್ಪ ವಿದ್ಯಾರ್ಥಿಗೆ ಪ್ರವೇಶ ನಕಾರಕ್ಕೆ ಆಕ್ರೋಶ

09:33 PM Dec 02, 2023 | Team Udayavani |

ಹೈದರಾಬಾದ್‌: ತೆಲಂಗಾಣದ ಮೆಡ್ಚಲ್‌- ಮಲ್ಕಜ್‌ಗಿರಿಯ ಕೀಸಾರಾ ಎಂಬಲ್ಲಿರುವ ಖಾಸಗಿ ಶಾಲೆಯಲ್ಲಿ ಅಯ್ಯಪ್ಪ ವ್ರತಧಾರಿ ವಿದ್ಯಾರ್ಥಿಗೆ ಪ್ರವೇಶ ನಿರಾಕರಿಸಿದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇದರಿಂದಾಗಿ ಸ್ಥಳದಲ್ಲಿ ಕೊಂಚ ಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.

Advertisement

ಈ ಸುದ್ದಿ ತಿಳಿದ ಕೂಡಲೇ ಸಮೀಪದ ರಾಂಪಲ್ಲಿ ಸೇರಿದಂತೆ ಹಲವು ಸ್ಥಳಗಳಿಂದ ಅಯ್ಯಪ್ಪ ಭಕ್ತರು ಶಾಲೆಯ ಆವರಣಕ್ಕೆ ಆಗಮಿಸಿ ಗದ್ದಲ ಎಬ್ಬಿಸಿದರು. ಒಂದು ಹಂತದಲ್ಲಿ ವಾಗ್ವಾದ ಕೈಮೀರಿ ಹೋಗಿ ಗುಂಪಿನಲ್ಲಿದ್ದ ಕೆಲವರು ಮುಖ್ಯ ಗೇಟ್‌ ಮತ್ತು ಇತರ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಶಾಲೆಯ ಆಡಳಿತ ಮಂಡಳಿ ಕ್ಷಮೆ ಯಾಚಿಸಬೇಕು ಎಂದು ಗುಂಪು ಒತ್ತಾಯಿಸಿತು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next