Advertisement

ರೈತ ವಿರೋಧಿ ಕಾಯ್ದೆ ವಿರುದ್ಧ ಆಕ್ರೋಶ

05:31 PM Dec 28, 2020 | Suhan S |

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನುಹಿಂಪಡೆಯುವಂತೆ ಆಗ್ರಹಿಸಿ ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ ತಟ್ಟೆ ಬಡಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಬೆಂಬಲ ವ್ಯಕ್ತಪಡಿಸಿತು.

Advertisement

ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತ ಹೋರಾಟಗಾರರು ಕರೆ ನೀಡಿದಂತೆ,ಪ್ರಧಾನಿ ನರೇಂದ್ರ ಮೋದಿ ಮನ್‌ ಕೀ ಬಾತ್‌ಭಾಷಣ ಸಂದರ್ಭದಲ್ಲಿ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಎನ್‌ಎಸ್‌ಯುಐಕಾರ್ಯಕರ್ತರು ತಟ್ಟೆ ಬಾರಿಸುವಮೂಲಕ ಬೆಂಬಲ ವ್ಯಕ್ತಪಡಿಸಿದರು.

ದೆಹಲಿ ರೈತರ ಹೋರಾಟಕ್ಕೆ ಬೆಂಬಲಿಸಿಮನ್‌ ಕಿ ಬಾತ್‌ ಸಂದರ್ಭದಲ್ಲಿ ತಟ್ಟೆಬಾರಿಸಿಪ್ರತಿಭಟಿಸುವಂತೆ ಭಾರತೀಯಕಿಸಾನ್‌ ಯೂನಿಯನ್‌ ಕರೆ ಕೊಟ್ಟಿತ್ತು.ಅದರಂತೆ ಪ್ರತಿಭಟನೆ ನಡೆಸಿದ ಜಿಲ್ಲಾ ಎನ್‌ಎಸ್‌ಯುಐ ಪದಾ ಧಿಕಾರಿಗಳು, ಕೃಷಿ ವಿರೋಧಿ  ಕಾಯ್ದೆಗಳನ್ನು ಹಿಂಪಡೆಯುವಂತೆಆಗ್ರಹಿಸಿದರು. ದೆಹಲಿಯಲ್ಲಿ ಒಂದುತಿಂಗಳಿಂದ ರೈತರು ಮೂರು ಕೃಷಿ ಕಾಯ್ದೆಗಳವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಡೀ ದೇಶಾದ್ಯಂತ ಕೃಷಿ ಕಾಯ್ದೆಗಳನ್ನು ಕೈಬಿಡುವಂತೆಲಕ್ಷಾಂತರ ರೈತರು ಒತ್ತಾಯಿಸಿದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದರು.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ತಿದ್ದುಪಡಿಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ.ಕೇಂದ್ರ ಸರ್ಕಾರವು ಬಂಡವಾಳಶಾಹಿಗಳು ಹಾಗೂ ಉದ್ಯಮಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಕೆ. ಚೇತನ್‌,ಜಿಲ್ಲಾಧ್ಯಕ್ಷ ಎಚ್‌.ಎಸ್‌. ಬಾಲಾಜಿ, ಯುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮಧುಸೂದನ್‌,ಮಹಮದ್‌ ನಿಹಾಲ್‌, ಎನ್‌ಎಸ್‌ಯುಐಕಾರ್ಯಾಧ್ಯಕ್ಷ ವಿನಯ್‌, ನಗರಾಧ್ಯಕ್ಷವಿಜಯ್‌, ಗ್ರಾಮಾಂತರ ಅಧ್ಯಕ್ಷ ರವಿ,ವಿನ್ಯಾಸ್‌, ಮಂಜು ಪುರಲೆ, ಮಹಮದ್‌ನಿಹಾಲ್‌, ಅಬ್ದುಲ್‌ ಸತ್ತರ, ಗಿರೀಶ್‌, ಶಿವು,ಭರತ್‌, ಸಂದೀಪ್‌, ಪ್ರಮೋದ್‌, ಆಕಾಶ್‌, ರವಿ, ಹೇಮಂತ್‌, ಸಂಜಯ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next