Advertisement

ಪಕ್ಷಕ್ಕಿಂತ ನಮಗೆ ದೇಶವೇ ದೊಡ್ಡದು: ವಾರಾಣಸಿಯಲ್ಲಿ ಮೋದಿ

12:04 PM Sep 23, 2017 | Team Udayavani |

ಲಕ್ನೋ : “ನಮ್ಮ ರಾಜಕಾರಣ ಓಟಿಗಾಗಿ ಅಲ್ಲ; ಪಕ್ಷಕ್ಕಿಂತ ನಮಗೆ ದೇಶವೇ ದೊಡ್ಡದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶನಿವಾರ ಶಹನ್‌ಶಾಪುರದಲ್ಲಿ ರೈತರ ಸಮಾವೇಶವನ್ನು ಉದ್ದೇಶಿಸಿ ಹೇಳಿದರು. 

Advertisement

ಪ್ರಧಾನಿ ಮೋದಿ ಅವರೀಗ ತಮ್ಮ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಗೆ ಎರಡು ದಿನಗಳ ಭೇಟಿಯಲ್ಲಿದ್ದು ಇದು ಅವರ ಎರಡನೇ ದಿನದ ಕಾರ್ಯಕ್ರಮವಾಗಿದೆ. ಅವರಿಂದಿಲ್ಲಿ ಪಶುಧನ ಆರೋಗ್ಯ ಮೇಳವನ್ನು ಉದ್ಘಾಟಿಸಿ, ರೈತರಿಗೆ ಸಾಲ ಮನ್ನಾ ಸರ್ಟಿಫಿಕೇಟ್‌ ನೀಡಿ ಅವರನ್ನು ಸಮ್ಮಾನಿಸಿದರು.

ಉತ್ತರ ಪ್ರದೇಶ ರಾಜ್ಯಾದ್ಯಂತದ ರೈತರಿಗೆ ಪಶುಧನ ಮೇಳದಿಂದ ತುಂಬಾ ಪ್ರಯೋಜನವಾಗಲಿದೆ ಎಂದು ಮೋದಿ ಹೇಳಿದರು. 

ಪಶು ಆರೋಗ್ಯ ಮೇಳವನ್ನು ಆಯೋಜಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. 

“ನಮ್ಮ ದೃಷ್ಟಿಯಲ್ಲಿ ಆಡಳಿತೆ ಎಂದರೆ ವೋಟ್‌ ಬ್ಯಾಂಕ್‌ ಅಲ್ಲ; ಚುನಾವಣೆಗಳನ್ನು ಗೆಲ್ಲುವುದು ಅಲ್ಲ; ನಮಗೆ ಪಕ್ಷಕ್ಕಿಂತ ದೇಶವೇ ದೊಡ್ಡದು; ಆದುದರಿಂದ ನವಭಾರತ ನಿರ್ಮಾಣವೇ ನಮ್ಮ ಗುರಿಯಾಗಿದೆ’ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದರು. 

Advertisement

ಸ್ವಚ್ಚತೆ ಎನ್ನುವುದು ನಮ್ಮ ಸ್ವಭಾವವಾಗಬೇಕು; ಅದು ನಮ್ಮ ಸಾಮೂಹಿಕ ಹೊಣೆಗಾರಿಕೆಯಾಗಿರಬೇಕು. ಸ್ವಚ್ಚ ಭಾರತವು ಆರೋಗ್ಯಕರ ಭಾರತವಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಮೋದಿ ಹೇಳಿದರು. 

ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಡಗೂಡಿ ಮೋದಿ ಸ್ವಚ್ಚ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. 

ಪ್ರಧಾನಿ ಮೋದಿ ಅವರಿಂದು ಶಹಜಹಾನಪುರದಲ್ಲಿನ 67 ವರ್ಷಗಳಷ್ಟು ಹಳೆಯ ಗೋಶಾಲೆಯಲ್ಲಿ ಗೋಪೂಜೆ ನಡೆಸಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next