Advertisement

ನಮ್ಮ ನಿರ್ಧಾರ ಅಚಲ: ವಿಶ್ವನಾಥ್‌

11:36 PM Jul 13, 2019 | Team Udayavani |

ಬೆಂಗಳೂರು: ವಿಶ್ವಾಸಮತಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ನಿರ್ಧಾರ ತಂತ್ರಗಾರಿಕೆಯ ಒಂದು ಭಾಗ. ಆದರೆ, ನಾವ್ಯಾರೂ ತೀರ್ಮಾನ ಬದಲಿಸುವುದಿಲ್ಲ ಎಂದು ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ಖಡಕ್‌ ಆಗಿ ನುಡಿದಿದ್ದಾರೆ.

Advertisement

ಮುಂಬೈನಲ್ಲಿ ಅತೃಪ್ತ ಶಾಸಕರ ಜತೆ ದೇವಾಲಯಗಳ ಭೇಟಿಯಲ್ಲಿರುವ ಅವರು, ಸಮ್ಮಿಶ್ರ ಸರ್ಕಾರ ಪತನದ ನಂತರವೇ ನಾವು ವಾಪಸ್ಸಾಗುತ್ತೇವೆ. ನಮ್ಮ ನಿರ್ಧಾರ ಅಚಲ ಎಂದು ತಿಳಿಸಿದರು.

ಹಣಕಾಸು ವಿಧೇಯಕ ಮಂಡನೆಯಾದರೂ ಸಂಖ್ಯಾಬಲ ಇಲ್ಲದ ಕಾರಣ ಬಿದ್ದು ಹೋಗುತ್ತದೆ. ಆಗ ಸರ್ಕಾರ ತನ್ನಿಂತಾನೆ ಬೀಳುತ್ತದೆ. ಹೊಸ ಸರ್ಕಾರ ಬಂದ ನಂತರ ಹಣಕಾಸು ಮಸೂದೆ ಅಂಗೀಕಾರವಾಗಲಿದೆ ಎಂದರು.

ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ: ಈ ಮಧ್ಯೆ, ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಮಾತನಾಡಿದ ಸಚಿವ ಬಂಡೆಪ್ಪ ಕಾಶೆಂಪೂರ್‌, ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಸುಸೂತ್ರವಾಗಿದೆ. ಮುಖ್ಯಮಂತ್ರಿಯವರು ವಿಶ್ವಾಸಮತ ಕೇಳಿದ್ದಾರೆ. ನಮಗೆ ಜಯ ಲಭಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next