Advertisement

ಅಂಗಾಂಗ ದಾನ ವಿಶೇಷ ತರಂಗ ಬಿಡುಗಡೆ

11:21 PM Mar 23, 2022 | Team Udayavani |

ಬೆಂಗಳೂರು: ಪ್ರತಿಷ್ಠಿತ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ನ “ತರಂಗ’ ವಾರಪತ್ರಿಕೆಯು ಅಂಗಾಂಗ ದಾನ ಕುರಿತು ಅರಿವು ಮೂಡಿಸಲು ಹೊರತಂದ ವಿಶೇಷ ಸಂಚಿಕೆಯನ್ನು ನಗರದಲ್ಲಿ ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಮತ್ತು ಮಣಿಪಾಲ್‌ ಆಸ್ಪತ್ರೆಗಳ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಸುದರ್ಶನ್‌ ಬಲ್ಲಾಳ್‌ ಪ್ರತ್ಯೇಕವಾಗಿ ಬಿಡುಗಡೆ ಮಾಡಿದರು.

Advertisement

ಸಚಿವ ಡಾ| ಸುಧಾಕರ್‌ ಮಾತನಾಡಿ, ಸಂಧ್ಯಾ ಪೈ ಅವರ ಸಾರಥ್ಯದಲ್ಲಿ ಉದಯವಾಣಿ ಸಮೂಹದಿಂದ ಪ್ರಕಟಗೊಳ್ಳುತ್ತಿರುವ ಓದುಗರ ಮತ್ತು ನನ್ನ ನೆಚ್ಚಿನ ವಾರಪತ್ರಿಕೆ “ತರಂಗ’ವನ್ನು ಚಿಕ್ಕವನಿದ್ದಾಗಿನಿಂದಲೂ ಓದುತ್ತಾ ಬೆಳೆದಿದ್ದೇನೆ. ಈ ಜನಪ್ರಿಯ ವಾರಪತ್ರಿಕೆಯು ಅಂಗಾಂಗ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶೇಷ ಸಂಚಿಕೆ ಹೊರತಂದಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.


ಡಾ| ಸುದರ್ಶನ್‌ ಬಲ್ಲಾಳ್‌ ಮಾತನಾಡಿ, “ನನ್ನ ತವರೂರಿನದ್ದೇ ಆದ “ತರಂಗ’ ವಾರಪತ್ರಿಕೆಯನ್ನು ಓದುತ್ತಲೇ ನಮ್ಮ ಇಡೀ ಕುಟುಂಬ ವರ್ಗ ಬೆಳೆದಿದೆ. ಈ ತಂಡವು ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಲು ವಿಶೇಷ ಸಂಚಿಕೆ ತಂದಿರುವುದು ಸಂತಸದ ಸಂಗತಿ’ ಎಂದರು. ಉದಯವಾಣಿ ಬೆಂಗಳೂರು ಆವೃತ್ತಿ ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕ ಎಸ್‌. ಭರತ್‌, ವ್ಯವಸ್ಥಾಪಕ ಬಿ.ಕೆ.ಕೃಷ್ಣಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next