Advertisement

ಅಂಗಾಂಗ ದಾನ : ಸಾವಿನಲ್ಲೂ ಸಾರ್ಥಕತೆ ಮೆರೆದ ಚಂದನ್‌

07:27 PM Mar 12, 2021 | Team Udayavani |

ನಂಜನಗೂಡು: ತಾನು ದುರಂತ ಸಾವು ಕಂಡಿದ್ದರೂ ಬೇರೆಯವರ ಜೀವನವನ್ನು ಚಂದಗಾಣಿಸಿದ ಅಪರೂಪದ ಕಾರ್ಯ ವನ್ನು ನಂಜನಗೂಡಿನ ನಿವಾಸಿ ಚಂದನ ಮಾಡಿದ್ದಾನೆ.

Advertisement

ನಗರದ ಬಸವನಗು ಡಿ ನಿವಾಸಿ ಬ್ಯಾಂಕ್‌ ಉದ್ಯೋಗಿ ಪುಷ್ಪಾ ಮಲ್ಲಪ್ಪ ಅವರ ಏಕೈಕ ಪುತ್ರನ ಚಂದನ್‌ (28) ಕಳೆದ ಭಾನುವಾರ ರಸ್ತೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದರು. ಕೋಮಾಕ್ಕೆ ಜಾರಿದ್ದ ಅವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು.

ಚಿಂತಾಜನಕ ಪರಿಸ್ಥಿತಿಯನ್ನು ಆತನ ತಾಯಿ ಹಾಗೂ ಸಂಬಂಧಿಕರಿಗೆ ತಿಳಿಸಿ, ಅಂಗಾಂಗ ದಾನದ ಮಹತ್ವ ಕುರಿತು ವೈದ್ಯರು ಮನವರಿಕೆ ಮಾಡಿದ್ದರು. ಇದಕ್ಕೆ ಪೋಷಕರು ಸಮ್ಮತಿ ನೀಡಿದ್ದರಿಂದ ಚಂದನ್‌ ಅವರ ಕಿಡ್ನಿ, ಮೇದೋಜ್ಜೀರಕ ಗ್ರಂಥಿ, ಕಣ್ಣು ಸೇರಿದಂತೆ ನಾಲ್ಕು ಅಂಗಾಗಳನ್ನು ದಾನ ಮಾಡಲಾಗಿದೆ.  ಪೋಷಕರ ಈ ಸತ್ಕಾರ್ಯದಿಂದ ನಾಲ್ವರಿಗೆ ಬದುಕು ನೀಡಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next