Advertisement

ಕೇಂದ್ರದಿಂದ ರೈತರ ಮೇಲೆ ದಬ್ಬಾಳಿಕೆ; ಕೋಡಿಹಳ್ಳಿ ಚಂದ್ರಶೇಖರ್‌

06:30 AM Oct 05, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರವು ರೈತರ ದೆಹಲಿ ಪ್ರವೇಶಕ್ಕೆ ತಡೆಯಲು ತನ್ನ ಅಧಿಕಾರವನ್ನು ಬಳಸಿ ಜಲಪಿರಂಗಿ ಹಾಗೂ ಅಶ್ರುವಾಯುಗಳ ದಾಳಿ ನಡೆಸಿದೆ ಎಂದು ರೈತ ಹಾಗೂ ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್‌ ಆರೋಪಿಸಿದ್ದಾರೆ.

Advertisement

ಗುರುವಾರ ಪ್ರಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರವರು ರೈತರು ದೆಹಲಿ ಸಮೀಪಿಸುವ ಮೊದಲು ಅವರೊಂದಿಗೆ ಸಮಾಲೋಚಿಸಿ ಸಮಸ್ಯೆಗೆ ಪ್ರಯತ್ನ ಹುಡುಕಬೇಕಿತ್ತು. ಅದರೆ, ತಮ್ಮ ಅಧಿಕಾರವನ್ನು ಬಳಸಿ ರೈತರ ಮೇಲೆ ದಬ್ಬಾಳಿಕೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಧಾನಿ-ಅಬಾನಿಗಳನ್ನು ಒಳಗೊಂಡಂತೆ ಅನೇಕ ಬಂಡವಾಳ ಶಾಹಿಗಳಿಗೆ  ಆರು ಲಕ್ಷ ಕೋಟಿ ರೂ.ಗಳ ತೆರಿಗೆ ರಿಯಾಯ್ತಿ ನೀಡುವ ಮೂಲಕ ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವೆಂದು ಸಾಬೀತು ಮಾಡಿದೆ. ಆದರೆ, ದೇಶದ ಬಂಡವಾಳಶಾಹಿಗಳಿಗೆ ತೋರುವ ಔದಾರ್ಯ ಅನ್ನದಾತನಿಗೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಮುಂದಿನ ದಿನಗಳಲ್ಲಾದರೂ ಡಾ.ಎಂ.ಎನ್‌.ಸ್ವಾಮಿನಾಥನ್‌ ವರದಿಯನ್ನು ಆಧರಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next