Advertisement

ರಾಹುಲ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಬಡ್ತಿಗೆ ವಿರೋಧ

10:53 PM May 05, 2023 | Team Udayavani |

ಹೊಸದಿಲ್ಲಿ: ರಾಹುಲ್‌ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ನ್ಯಾಯಾಧೀಶರು ಸಹಿತ 68 ನ್ಯಾಯಾಧೀಶರಿಗೆ ನೀಡಿರುವ ಬಡ್ತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ನ್ಯಾಯಮೂರ್ತಿಗಳಾದ ಎಂ.ಎಆರ್‌.ಷಾ ಅವರ ನ್ಯಾಯಪೀಠವು ಈ ಅರ್ಜಿಯನ್ನು ಮೇ 8ರಂದು ವಿಚಾರಣೆ ನಡೆಸಲಿದೆ. ಶೇ.65 ಮೀಸಲಾತಿ ಆಧಾರದಲ್ಲಿ ಈ 68 ನ್ಯಾಯಾಧೀಶರಿಗೆ ಬಡ್ತಿ ನೀಡಲಾಗಿತ್ತು. ಆದರೆ ಈ ಬಡ್ತಿಯನ್ನು ರದ್ದುಗೊಳಿಸುವಂತೆ ಹಾಗೂ ಮೀಸಲಾತಿ ಜತಗೆ ಬಡ್ತಿಯಲ್ಲಿ ನ್ಯಾಯಾ ಧೀಶರ ಹಿರಿತನದ ಆಧಾರವನ್ನು ಪರಿಗಣ ಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇದರಲ್ಲಿ ಸೂರತ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾ ಲಯದ ನ್ಯಾಯಾಧೀಶ, ರಾಹುಲ್‌ ವಿರುದ್ಧ ತೀರ್ಪು ಹಸು¾ಖ್‌ಬಾಯ್‌ ಹರೀಶ್‌ ಕೂಡ ಸೇರಿದ್ದಾರೆ. ಹಿರಿಯ ಸಿವಿಲ್‌ ಜಡ್ಜ್ ಕೇಡರ್‌ನ ನ್ಯಾಯಾಂಗ ಅಧಿಕಾರಿಗಳಾದ ರವಿಕುಮಾರ್‌ ಮೆಹ್ತಾ ಹಾಗೂ ಸಚಿನ್‌ ಪ್ರತಾಪ್ರಾಯ ಮೆಹ್ತಾ ಸುಪ್ರೀಂಕೋರ್ಟ್‌ ನಲ್ಲಿ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮಾರ್ಚ್‌10 ರಂದು ಗುಜರಾತ್‌ ಹೈಕೋರ್ಟ್‌ 68 ಮಂದಿಯ ಈ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು.

Advertisement

ವಿದ್ಯಾರ್ಥಿಗಳೊಂದಿಗೆ ರಾಹುಲ್‌ ಸಂವಾದ
ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದಿಲ್ಲಿ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿ­ಗಳೊಂದಿಗೆ ಸಂವಾದ ನಡೆಸಿ­ದ್ದಾರೆ.
ಪುರುಷರ ಹಾಸ್ಟೆಲ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಬಿಳಿ ಟೀಶರ್ಟ್‌, ಪ್ಯಾಂಟ್‌ ಧರಿಸಿದ್ದ ಅವರು ವಿದ್ಯಾರ್ಥಿಗಳ ಸಮಸ್ಯೆಗಳೇ­ನೆಂದು ತಿಳಿಯಲು ಬಯಸಿ­ದ್ದರು ಎಂದು ಮೂಲ ಗಳು ಹೇಳಿವೆ.

ಕಳೆದ ತಿಂಗಳು ರಾಹುಲ್‌ ಗಾಂಧಿ, ಯುಪಿಎಸಿ ಪರೀಕ್ಷೆಗಳಿಗೆ ಸಿದ್ಧರಾಗಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಆಗವರು ರಸ್ತೆ ಬದಿಯಲ್ಲಿ ಒಂದು ಕುರ್ಚಿ ಹಾಕಿಕೊಂಡು ಕುಳಿತು ವಿದ್ಯಾರ್ಥಿಗಳು ಮತ್ತವರ ನಿರೀಕ್ಷೆಗಳನ್ನು ಆಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next