Advertisement

ಬಿಆರ್‌ಟಿಎಸ್‌ ಯೋಜನೆಗೆ ವಿರೋಧ

05:26 PM Dec 23, 2020 | Suhan S |

ಹುಬ್ಬಳ್ಳಿ: ಅವೈಜ್ಞಾನಿಕ, ಅಪಾಯಕಾರಿ ಎಚ್‌ ಡಿಬಿಆರ್‌ಟಿಎಸ್‌ ಯೋಜನೆ ವಿರೋಧಿಸಿ ಇಲ್ಲಿನ ಹೊಸೂರಿನ ಬಿಆರ್‌ಟಿಎಸ್‌ ಮುಖ್ಯ ಕಚೇರಿ ಎದುರು ಮಂಗಳವಾರ ಆಮ್‌ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತು.

Advertisement

ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಬಿಆರ್‌ಟಿಎಸ್‌ ಹುಬ್ಬಳ್ಳಿ-ಧಾರವಾಡ ಜನತೆಯ ಮಹತ್ವಾಕಾಂಕ್ಷೆ ಯೋಜನೆ. ಆದರೆ ಇದು ಅವೈಜ್ಞಾನಿಕ, ಅಪಾಯಕಾರಿ ವಿನ್ಯಾಸದ ಕಾಮಗಾರಿಯಾಗಿದೆ. ಸುಮಾರು 1,200ಕೋಟಿ ರೂ. ವೆಚ್ಚದ ಈ ಯೋಜನೆ ಸಾರ್ವಜನಿಕರು ಹಾಗೂ ವಾಹನ ಸವಾರರ ಬಳಕೆಗೆ ದುಃಸ್ವಪ್ನವಾಗಿದೆ. ಹು-ಧಾ ನಡುವಿನ ಬಿಆರ್‌ಟಿಎಸ್‌ ಕಾರಿಡಾರ್‌ ಬಳಸುವ ಬಸ್‌ ಪ್ರಯಾಣಿಕರು, ಪಾದಚಾರಿಗಳು ಮತ್ತು ಮಿಶ್ರ ಸಂಚಾರ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಶಾಪವಾಗಿ ಮಾರ್ಪಟ್ಟಿದೆ. ಅವಳಿ ನಗರದ ನಡುವೆ ತ್ವರಿತ ಸಾರಿಗೆ ಸೇವೆ ಒದಗಿಸುವ ಚಿಗರಿಯಾಗಬೇಕಿದ್ದ ಬಿಆರ್‌ಟಿಎಸ್‌ ಇದೀಗ ನರಭಕ್ಷಕ ಚಿಗರಿಯಾಗಿ ಜನರು, ಸವಾರರನ್ನು ಕಾಡುತ್ತಿದೆ. ಇದರಿಂದ ಈ ಕಾರಿಡಾರ್‌ನಲ್ಲಿ ಸಂಚರಿಸಲು ಜನರು, ವಾಹನ ಸವಾರರು ಜೀವದ ಹಂಗುತೊರೆದು ಹೋಗುವ ಪರಿಸ್ಥಿತಿನಿರ್ಮಾಣವಾಗಿದೆ. ಅವಳಿ ನಗರದ ಜನರನ್ನು ವಿನಾಕಾರಣ ಅಪಾಯಕ್ಕೆ ಸಿಲುಕಿಸಿ, ಪ್ರತಿದಿನಅಪಘಾತಗಳು ಎದುರಿಸುವಂತೆ ಮಾಡಿದೆ. ಸರ ಕಾರ ಸಮ ಸ್ಯೆ-ಗೊಂದಲ ನಿವಾರಿಸಲಿ ಇಲ್ಲವೆ ಯೋಜನೆ ರದ್ದು ಮಾಡಲಿ ಎಂದು ಒತ್ತಾಯಿಸಿದರು.

ವಾಕರಸಾ ಸಂಸ್ಥೆ ಹು-ಧಾ ವಿಭಾಗೀಯ ನಿಯಂತ್ರಕ ವಿವೇಕಾನಂದ ವಿಶ್ವಜ್ಞ, ಹು-ಧಾ ಬಿಆರ್‌ಟಿಎಸ್‌ ಡಿಜಿಎಂ ಬಸವರಾಜಕೇರಿ ಮುಖಾಂತರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ರಾದ ವಿಕಾಸ ಸೊಪ್ಪಿನ, ಶಶಿಕುಮಾರ ಸುಳ್ಳದ, ಅನಂತಕುಮಾರ ಭಾರತೀಯ, ಶಿವಕಿರಣ ಅಗಡಿ, ಪದಾಧಿಕಾರಿ ಗಳಾದ ಡೇನಿಯಲ್‌ ಐಕೋಸ್‌, ರವೀಂದ್ರ ಶೆಣೈ, ಮನೋಹರ ಸುಗನಾನಿ, ನವೀನಸಿಂಗ ರಜಪೂತ, ಲಕ್ಷ್ಮಣ ರಾಠೊಡ, ಡಿ.ಕೆ. ಜಾಧವ, ಪ್ರವೀಣ ತೊಂಡಿಹಾಳ, ಸಂತೋಷ ಮಾನೆ, ಶಿವಕುಮಾರ ಬಾಗಲಕೋಟೆ, ಆದಿತ್ಯ ನಾಯ್ಕ ಇನ್ನಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next