Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ

06:50 AM May 13, 2020 | Lakshmi GovindaRaj |

ಬೆಂಗಳೂರು: ಎಪಿಎಂಸಿ ಖಾಸಗೀಕರಣ ಹಾಗೂ ಕಾರ್ಮಿಕರು ದಿನದ 12 ಗಂಟೆ ಕೆಲಸ ಮಾಡುವ ಸಂಬಂಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಪ್ರಯತ್ನ ನಡೆಸುತ್ತಿದ್ದು, ಕೊರೊನಾ ಸಂಕಷ್ಟ  ಸಂದರ್ಭದಲ್ಲಿ ಇಂತಹ ತೀರ್ಮಾನ ಕೈಗೊಳ್ಳುವ ಸರ್ಕಾರಕ್ಕೆ ನಾಚಿಕೆ ಆಗಬೇಕೆಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಪಿಎಂಸಿಗಳ  ಖಾಸಗೀಕರಣದಿಂದ ಸರ್ಕಾರದ ಬೊಕ್ಕಸಕ್ಕೆ 600 ಕೋಟಿ ರೂ. ನಷ್ಟವಾಗಲಿದೆ. ರೈತರು ವರ್ತಕರಿಗೆ ಕಷ್ಟವಾಗಲಿದೆ. ನಮ್ಮ ಮಾರುಕಟ್ಟೆಗಳು ಉಳ್ಳವರ ಪಾಲಾಗಿ ರೈತರ ಉತ್ಪನ್ನಕ್ಕೆ ಬೆಲೆ ನಿಗದಿಯೂ ಅವರದೇ ಕೈಗೆ  ಹೋಗಲಿದೆ. ಇದು ರೈತಾಪಿ ಸಮುದಾಯಕ್ಕೆ ಮಾರಕ ಎಂದಿದ್ದಾರೆ. ಅದೇ ರೀತಿ ಕಾರ್ಮಿಕರು ಈಗ ದಿನಕ್ಕೆ ಎಂಟು ಗಂಟೆ ಕೆಲಸ ಮಾಡುತ್ತಿದ್ದು ಆ ಅವಧಿ 12 ಗಂಟೆಗೆ ಏರಿಸಲು ಮುಂದಾಗಿದೆ.

ಇದು ಕಾರ್ಮಿಕ ವಿರೋಧಿ ನೀತಿ, ಕಾರ್ಮಿಕರು 12 ಗಂಟೆ ದುಡಿಯುವ ಸಾಮರ್ಥಯ ಹೊಂದಿರುತ್ತಾರೆಯೇ ಎಂಬುದರ ಬಗ್ಗೆ ವೈಜ್ಞಾನಿಕ ಅಧ್ಯಯನ ಆಗದೆ ತೀರ್ಮಾನ ಕೈಗೊಳ್ಳುವುದು ಅಮಾನವೀಯ. ಕೈಗಾರಿಕೆ ಉಳಿಸಲು ಸರ್ಕಾರ ಪರಿಹಾರ  ಪ್ಯಾಕೇಜ್‌ ಕೊಡಲಿ, ಅದು ಬಿಟ್ಟು ಇಂತಹ ಕಾನೂನು ಸರಿಯಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next