Advertisement

ಬಾಲಾಕೋಟ್‌ ಸಾಕ್ಷ್ಯ ಕೇಳಿ ಪೇಚಿಗೆ ಸಿಲುಕಿರುವ ವಿಪಕ್ಷ : ಜೇತ್ಲಿ

01:32 PM Mar 16, 2019 | Team Udayavani |

ಹೊಸದಿಲ್ಲಿ : ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲಿನ ಐಎಎಫ್ ವಾಯು ದಾಳಿಗೆ ಸಾಕ್ಷ್ಯ ಕೇಳುವ ಮೂಲಕ ವಿರೋಧ ಪಕ್ಷಗಳು ತಮ್ಮ ಕಡೆಯಲ್ಲೇ ಗೊಲು ಹೊಡೆದುಕೊಂಡಿವೆ ಮತ್ತು ಆ ಮೂಲಕ ಪೇಚಿಗೆ ಸಿಲುಕಿಕೊಂಡಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಇಂದು ಶನಿವಾರ ಹೇಳಿದ್ದಾರೆ.

Advertisement

ಭಾರತೀಯ ವಾಯ ಪಡೆ ನಡೆಸಿರುವ ಸರ್ಜಿಕಲ್‌ ಸ್ಟೈಕ್‌ ಆಗಲೀ ಬಾಲಾಕೋಟ್‌ ವಾಯು ದಾಳಿಯಾಗಲೀ ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಬಾರದು ಎಂದವರು ಇಂಡಿಯಾ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದರು. 

ಹುತಾತ್ಮ ಸೈನಿಕರ ಫೋಟೋಗಳನ್ನು ರಾಜಕೀಯ ಪೋಸ್ಟರ್‌ಗಳಲ್ಲಿ ಬಳಸಬಾರದೆಂಬ ಚುನಾವಣಾ ಆಯೋಗದ ಅಭಿಪ್ರಾಯವನ್ನು ನಾನು ಪೂರ್ಣವಾಗಿ ಒಪ್ಪುತ್ತೇನೆ ಎಂದು ಜೇತ್ಲಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next