Advertisement

ಮಂದಿರ ನಿರ್ಮಾಣಕ್ಕೆ ವಿಪಕ್ಷಗಳು ವಿರೋಧಿಸಲ್ಲ: ಮೋಹನ್‌ ಭಾಗವತ್‌

03:10 AM Oct 03, 2018 | Team Udayavani |

ಹರಿದ್ವಾರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿಪಕ್ಷಗಳೂ ವಿರೋಧ ವ್ಯಕ್ತಪಡಿಸುವಂತಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು. ಹರಿದ್ವಾರದಲ್ಲಿರುವ ಪತಂಜಲಿ ಯೋಗಪೀಠದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ದೇಶದ ಹೆಚ್ಚಿನವರ ಆಶಯವಾಗಿದೆ ಎಂದು ಹೇಳಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ಬದ್ಧವಾಗಿವೆ ಎಂದಿದ್ದಾರೆ. “ಪ್ರತಿಯೊಂದು ಸರಕಾರಕ್ಕೆ ತನ್ನದೇ ಆಗಿರುವ ಇತಿಮಿತಿಗಳಿವೆ. ಅದಕ್ಕೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಆದರೆ ಸಂತರು ಮತ್ತು ಸ್ವಾಮೀಜಿಗಳು ಆ ಮಿತಿಯಿಂದ ಹೊರತಾಗಿರುತ್ತಾರೆ. ಅವರು ಧರ್ಮ, ಸಮಾಜ, ದೇಶದ ಉದ್ಧಾರಕ್ಕಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next