Advertisement

opposition meeting ಭಾಗಿಯಾಗದ ಬಿಜೆಡಿ ವಿರುದ್ಧ ಆಕ್ರೋಶ ಹೊರ ಹಾಕಿದ ಕಾಂಗ್ರೆಸ್

06:08 PM Jun 24, 2023 | Team Udayavani |

ಭುವನೇಶ್ವರ: ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಒಡಿಶಾದ ಆಡಳಿತ ಪಕ್ಷ ಬಿಜು ಜನತಾ ದಳ ಸೇರದ ಕಾರಣಕ್ಕೆ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದ್ದು, ಸಿಎಂ ನವೀನ ಪಟ್ನಾಯಕ್ ಅವರ ಪಕ್ಷ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದೆ ಎಂದು ಆರೋಪಿಸಿದೆ.

Advertisement

ಉಭಯ ಪಕ್ಷಗಳ ನಡುವಿನ ಸಂಬಂಧವು “ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವವರೆಗೆ ಮುಂದುವರಿಯುತ್ತದೆ” ಎಂದು ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಸೆಲ್ ಮುಖ್ಯಸ್ಥ ಗಣೇಶ್ವರ್ ಬೆಹೆರಾ ಶುಕ್ರವಾರ ಹೇಳಿದ್ದಾರೆ.

“ಬಿಜೆಡಿ ಬಿಜೆಪಿಯೊಂದಿಗೆ ಇದೆ ಮತ್ತು ಸಂಬಂಧವನ್ನು ಮುಂದುವರಿಸುತ್ತದೆ ಎಂದು ನಾವು ದೀರ್ಘಕಾಲದಿಂದ ಹೇಳುತ್ತಿದ್ದೇವೆ. ಬಿಜೆಪಿಯನ್ನು ವಿರೋಧಿಸುವ ಗುಂಪಿಗೆ ಬಿಜೆಡಿ ಹೇಗೆ ಸೇರುತ್ತದೆ. ಬಿಜೆಡಿ ಪಕ್ಷ ಬಿಜೆಪಿಯಿಂದ ಎಂದಿಗೂ ಅಂತರವನ್ನು ಕಾಯ್ದುಕೊಂಡಿಲ್ಲ” ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಡಿ ವಕ್ತಾರ ಲೆನಿನ್ ಮೊಹಂತಿ, ”ಪಕ್ಷವು ಯಾವುದೇ ಗುಂಪು ಅಥವಾ ಮೈತ್ರಿಗೆ ಸೇರುವ ಯೋಜನೆ ಹೊಂದಿಲ್ಲ. ಪಕ್ಷ ಯಾವುದೇ ಮೈತ್ರಿಗೆ ಸೇರುವುದಿಲ್ಲ ಎಂದು ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಒಡಿಶಾದ 4.5 ಕೋಟಿ ಜನರ ಕಲ್ಯಾಣಕ್ಕೆ ನಾವು ಬದ್ಧರಾಗಿದ್ದೇವೆ. ಜನರ ಸೇವೆ ಮಾಡುವ ಶಕ್ತಿ ನಮ್ಮಲ್ಲಿದೆ ಎಂದು ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next