Advertisement

ಪ್ರತಿಪಕ್ಷಗಳ ಅಸಮಾಧಾನ

12:30 AM Feb 28, 2019 | |

ವೀರ ಯೋಧರು ನಡೆಸಿದ ಬಲಿದಾನವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಕಾಂಗ್ರೆಸ್‌ ನೇತೃತ್ವದ 21 ರಾಜಕೀಯ ಪಕ್ಷಗಳ ಸಭೆ ಆರೋಪಿಸಿದೆ. ಸಂಸತ್‌ ಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ  “ಬಿಜೆಪಿಯ ಕ್ರಮ ಸೇನೆಗೆ ಅಗೌರವ ತೋರುವಂತಿದೆ. ದೇಶದ ಸಾರ್ವಭೌಮತೆ, ಐಕ್ಯತೆ, ಸಮಗ್ರತೆ ಕಾಪಾಡುವ ಬಗ್ಗೆ ಕ್ರಮ ಕೈಗೊಳ್ಳುವಾಗ ಸರ್ಕಾರ ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಾಷ್ಟ್ರೀಯ ಭದ್ರತೆಯು  ರಾಜಕೀಯ ಮೀರಿದ್ದಾಗಿರಬೇಕು ಎಂದು ಪ್ರತಿಪಾದಿಸಿವೆ. ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸದೇ ಇದ್ದದ್ದೂ ವಿಷಾದಕರ’  ಎಂದು ಹೇಳಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಮುಖರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next