Advertisement

ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟನೆ

08:37 PM Mar 15, 2021 | Team Udayavani |

ದಾವಣಗೆರೆ: ಎಲ್ಲರಲ್ಲೂ ಸ್ನೇಹ ಬೆಳೆಸುವ ಉದ್ದೇಶದಿಂದ ಪ್ರತಿ ವರ್ಷ ಕ್ರಿಕೆಟ್‌ ಪಂದ್ಯಾವಳಿ ನಡೆಸುತ್ತಿರುವ ಕುಂದುವಾಡ ಯುವಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾಕಾರಿ ಮಹಾಂತೇಶ್‌ ಜಿ. ಬೀಳಗಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್‌, ಜರವೇಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಕುಂದುವಾಡ ಪ್ರೀಮಿಯರ್‌ ಲೀಗ್‌ -4 ಕ್ರಿಕೆಟ್‌ ಟೂರ್ನಿಮೆಂಟ್‌ನ್ನು ಬ್ಯಾಟಿಂಗ್‌ ಮಾಡುವ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳ ಯುವಕರಲ್ಲಿ ಸಣ್ಣಪುಟ್ಟ ಗಲಾಟೆಗಳು ಇರುತ್ತವೆ. ಕ್ರಿಕೆಟ್‌ನಲ್ಲಿ ಎಲ್ಲಾ ಯುವಕರನ್ನು ಒಗ್ಗೂಡಿಸುವ ಮೂಲಕ ಐಪಿಎಲ್‌ ಮಾದರಿಯಲ್ಲಿ ತುಂಬಾ ಅಚ್ಚುಕಟ್ಟಾಗಿ ಮನಾ ಯುವ ಬ್ರಿಗೇಡ್‌ ವೇದಿಕೆಯವರು ಕ್ರಿಕೆಟ್‌ ಆಯೋಜನೆ ಮಾಡಿರುವುದು ಸಂತೋಷದ ವಿಚಾರ ಎಂದರು.

ಮೇಯರ್‌ ಎಸ್‌. ಟಿ .ವೀರೇಶ್‌ ಮಾತನಾಡಿ, ಕ್ರಿಕೆಟ್‌ ಆಟ ದೈಹಿಕವಾಗಿ ಸಹಾಯವಾಗುತ್ತೆ. ಸ್ನೇಹತ್ವಕ್ಕಾಗಿ ಕ್ರಿಕೆಟ್‌ ಟೂರ್ನಿ ನಡೆಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಊರಿನ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಎಲ್ಲ ಯುವಕರು ಕೈ ಜೋಡಿಸಬೇಕು ಎಂದು ತಿಳಿಸಿದರು.. ವರ್ತಕ ರಾಘವೇಂದ್ರ, ಎನ್‌. ದಿವಾಕರ್‌, ಹನುಮಂತಪ್ಪ, ಶಿವಪ್ಪ, ಪತ್ರಕರ್ತರಾದ ಮಧು ನಾಗರಾಜ್‌ ಕುಂದುವಾಡ, ರಾಜೂ ಕರೂರು, ನಾಗರಾಜ್‌, ಎಸ್‌. ಬಿ. ಅಣ್ಣಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next