Advertisement

ಒತ್ತುವರಿ ರಸ್ತೆ ಸಂಚಾರಕ್ಕೆ ಮುಕ್ತ

08:09 AM Jul 24, 2020 | Suhan S |

ಶಿಡ್ಲಘಟ್ಟ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಾರ್ವಜನಿಕ ರಸ್ತೆಯ ಅಕ್ರಮ ಒತ್ತುವರಿಯನ್ನು ತಹಶೀಲ್ದಾರ್‌ ಕೆ.ಅರುಂಧತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ.

Advertisement

ತಾಲೂಕಿನ ಜಂಗಮಕೋಟೆ ಹೋಬಳಿ ಕಲ್ಯಾಪುರದಲ್ಲಿ ಕೆಲವರು ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಿ ಬೆಳೆಗಳನ್ನು ಇಡುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗೆ ದೂರು ಸಲ್ಲಿಸಿ ಸಾರ್ವಜನಿಕ ರಸ್ತೆ ತೆರವುಗೊಳಿಸ ಬೇಕೆಂದು ಮನವಿ ಮಾಡಿದರು. ಅತಿಕ್ರಮಣಕಾರರು ತಮ್ಮ ಪ್ರಭಾವದಿಂದಾಗಿ ರಸ್ತೆ ತೆರವು ಗೊಳಿಸಲು ಮುಂದಾಗದಿರುವುದನ್ನು ಗಮನಿಸಿದ ಗ್ರಾಮಸ್ಥರು, ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ರಸ್ತೆ ಒತ್ತುವರಿ ತೆರವುಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಆರ್‌.ಲತಾ ಸೂಚನೆ ಮೇರೆಗೆ ತಹಶೀಲ್ದಾರ್‌ ಕೆ.ಅರುಂಧತಿ ಅಂತಿಮ ನೋಟಿಸ್‌ ನೀಡಿದರು. ಅತಿ ಕ್ರಮಣಕಾರರು ಯಾವುದೇ ಉತ್ತರ ನೀಡದ ಕಾರಣ, ಪೊಲೀಸ್‌ ರಕ್ಷಣೆಯಲ್ಲಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ನಡೆಸಿದರು. ಕೆಲವರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರೆ, ಮುನಿಕೃಷ್ಣಪ್ಪ ಎಂಬುವರು ಅತಿಕ್ರಮಣದ ಜಾಗದಲ್ಲಿ ಬೆಳೆದಿದ್ದ ಅರ್ಧ ಟನ್‌ಗಳಷ್ಟು ಹಿಪ್ಪುನೇರಳೆ ಮಹಜರ್‌ ಮಾಡಿ ಕಟಾವು ಮಾಡಿ ಜೆಸಿಬಿಯಿಂದ ಅತಿಕ್ರಮಣ ಮಾಡಿದ್ದ ರಸ್ತೆಯನ್ನು ಅಧಿಕಾರಿಗಳು ತೆರವುಗೊಳಿಸಿದರು.

ಕಲ್ಯಾಪುರ ಮತ್ತು ರಾಳ್ಳಕುಂಟೆ ಮಧ್ಯೆ ಅತಿಕ್ರಮಣವಾಗಿದ್ದ ರಸ್ತೆಯನ್ನು ಸಾರ್ವ ಜನಿಕರ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಸಿಪಿಐ ಸುರೇಶ್‌, ಗ್ರಾಮಾಂತರ ಪೊಲೀಸ್‌ ಠಾಣೆಯ ಪಿಎಸ್‌ಐ ಲಿಯಾ ಖತುಲ್ಲಾ, ಜಂಗಮಕೋಟೆ ರಾಜಸ್ವ ನಿರೀಕ್ಷಕ ಸುಪ್ರೀತ್‌ ಹಾಗೂ ಭೂಮಾಪನ ಇಲಾ ಖೆಯ ಅಧಿಕಾರಿಗಳು ಕಾರ್ಯಾಚರಣೆಗೆ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next