Advertisement

“ಕಾಂಗ್ರೆಸ್‌ನಿಂದ ಮಾತ್ರ ಬಡವರಿಗೆ ನಿವೇಶನ‌’

06:25 AM Aug 08, 2017 | Harsha Rao |

ಪುಂಜಾಲಕಟ್ಟೆ  : ಕಾಂಗ್ರೆಸ್‌ ಪಕ್ಷದ ಆಡಳಿತ ಮಾತ್ರ ಮಾತ್ರ ಬಡವರಿಗೆ ನಿವೇಶನ,  ಸೂರು ಕೊಡುವ ಕೆಲಸ ಮಾಡಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ  ಹೇಳಿದರು. ಅವರು ಬಂಟ್ವಾಳ ತಾ| ಇರ್ವತ್ತೂರು ಗ್ರಾ.ಪಂ. ಸಭಾಂಗಣದಲ್ಲಿ ಇರ್ವತ್ತೂರು ಮತ್ತು ಮೂಡುಪಡುಕೋಡಿ ಗ್ರಾಮಗಳ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

Advertisement

ಇಂದಿರಾ ಗಾಂಧಿಯವರ ದೂರದರ್ಶಿತ್ವದಿಂದ ಭೂಮಸೂದೆ  ಕಾಯ್ದೆಯಿಂದ ಬಡಜನತೆ ಪಟ್ಟಾದಾರಿಕೆ ಹೊಂದಿದ್ದಾರೆ . 
ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜನಪರ ಯೋಜನೆಗಳಿಂದ ಮೆಚ್ಚುಗೆ ಗಳಿಸಿದೆ ಎಂದರು.
ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್‌, ತಾಲೂಕು ಅಕ್ರಮ -ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್‌, ತಾ.ಪಂ. ಸದಸ್ಯ ರಮೇಶ್‌ ಕುಡೆ¾àರ್‌, ಗ್ರಾ.ಪಂ. ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್‌, ಸದಸ್ಯ ಪ್ರಶಾಂತ್‌ ಕೋಟ್ಯಾನ್‌, ಎಪಿಎಂಸಿ ಸದಸ್ಯೆ ಭಾರತಿ, ಪಂ.ಅ. ಅಧಿಕಾರಿ ಗಣೇಶ್‌ ಶೆಟ್ಟಿಗಾರ್‌, ಗ್ರಾಮಕರಣಿಕ ಕುಮಾರ್‌ಟಿ.ಸಿ., ಗ್ರಾಮಸಹಾಯಕ ಸಂತೋಷ್‌, ಸುಧೀರ್‌ ಶೆಟ್ಟಿ , ಗುರುಪ್ರಸಾದ್‌ ಶೆಟ್ಟಿ ಮತ್ತಿತರರು  ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಸಚಿವರನ್ನು ಸಮ್ಮಾನಿಸಲಾಯಿತು.

84 ಫಲಾನುಭವಿಗಳಿಗೆ ಹಕ್ಕುಪತ್ರ, 5ಮಂದಿಗೆ ಸಹಾಯಧನ, 4 ಮಂದಿಗೆ ವಸತಿ ನಿರ್ಮಾಣ ಮಂಜೂರು ಪತ್ರ ವಿತರಿಸಲಾಯಿತು. Ó ಕಂದಾಯ ನಿರೀಕ್ಷಕ ನವೀನ್‌  ಸ್ವಾಗತಿಸಿ, ಎಸ್‌. ಅಬ್ದುಲ್‌ ರಹಿಮಾನ್‌ ಎಡೂ¤ರು ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next