Advertisement

ಧರ್ಮಸ್ಥಳ ಕ್ಷೇತ್ರ  ತುಲಾಭಾರ ಆನ್‌ಲೈನ್‌ ಬುಕ್ಕಿಂಗ್‌ಗೆ ಚಾಲನೆ

12:50 AM Jan 23, 2019 | Harsha Rao |

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಲ್ಲಿ ಆನ್‌ಲೈನ್‌ ಮೂಲಕ ತುಲಾಭಾರ ಸೇವೆಯನ್ನು ಮುಂಗಡ ಕಾದಿರಿಸುವ ಸೌಲಭ್ಯಕ್ಕೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಸೋಮವಾರ ಕ್ಷೇತ್ರದಲ್ಲಿ ಚಾಲನೆ ನೀಡಿದರು.

Advertisement

ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಪೂರಣ್‌ ವರ್ಮ ಉಪಸ್ಥಿತರಿದ್ದರು. ಭಕ್ತರು www.shridharmasthala.org ವೆಬ್‌ಸೈಟ್‌ ಮೂಲಕ ತುಲಾಭಾರ ಸೇವೆಯ ದಿನಾಂಕ ಹಾಗೂ ಇತರ ವಿವರಗಳನ್ನು ಭರ್ತಿ ಮಾಡಿ ಆನ್‌ಲೈನ್‌ ಮೂಲಕವೇ ಹಣ ಪಾವತಿಸಬಹುದಾಗಿದೆ. ಸೇವೆಯ ದಿನಾಂಕ ಕಾದಿರಿಸಿದ ಬಳಿಕ ಅದರ ಕುರಿತು ಖಚಿತ ಸಂದೇಶ ರವಾನಿಸಲಾಗುತ್ತದೆ.

ಧರ್ಮಸ್ಥಳಕ್ಕೆ ಬಂದಾಗ ಸಂದೇಶದ ವಿವರ ತಿಳಿಸಿ ತುಲಾಭಾರ ಸೇವೆ ಮಾಡಬಹು ದಾಗಿದೆ. ತುಲಾಭಾರ ಸೇವೆಗೆ ಆನ್‌ಲೈನ್‌ ಕಾದಿರಿಸುವ ಸೌಲಭ್ಯವನ್ನು ಡಿ. ಶ್ರೇಯಸ್‌ಕುಮಾರ್‌ ಮತ್ತು ನಿಶ್ಚಲ್‌ಕುಮಾರ್‌ ಡಿ. ಮಾರ್ಗದರ್ಶನದಲ್ಲಿ ಬೆಂಗಳೂರಿನ ವೈರ್‌ಕ್ಯಾಂಪ್‌ ಸಂಸ್ಥೆಯವರು ರೂಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next