Advertisement

ಆನ್‌ಲೈನ್‌, ಹೆಲ್ಪ್ ಡೆಸ್ಕ್ ಸೌಲಭ್ಯ

12:35 AM May 26, 2020 | Sriram |

ಕಾಸರಗೋಡು: ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳೂ ಚಟುವಟಿಕೆ ಆರಂಭಿಸಿದ್ದರೂ, ಸೇವೆಗಳಿಗಾಗಿ ಸಾರ್ವಜನಿಕರು ಈಗ ಕಚೇರಿಗಳಿಗೆ ಆಗಮಿಸುವಂತಿಲ್ಲ. ಆನ್‌ಲೈನ್‌ ಮೂಲಕ ಸೇವೆ ಒದಗಿಸಲು ಮತ್ತು ಹೆಲ್ಪ್ ಡೆಸ್ಕ್ ಮೂಲಕ ಜನತೆಗೆ ಉತ್ತರ ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಹುಸೂರ್‌ ಶಿರಸ್ತೇದಾರರಿಗೆ ಹೊಣೆ ನೀಡಲಾಗಿದೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೋವಿಡ್-19 ಕೋರ್‌ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ಅಧ್ಯಕ್ಷತೆ ವಹಿಸಿದ್ದರು.
ಉಪ ಜಿಲ್ಲಾಧಿಕಾರಿ ಅರುಣ್‌ ಕೆ.ವಿಜಯನ್‌, ಹೆಚ್ಚುವರಿ ದಂಡನಾಧಿಕಾರಿ ಎನ್‌. ದೇವಿದಾಸ್‌, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಎ.ಟಿ. ಮನೋಜ್‌, ಇತರ ಜಿಲ್ಲಾ ಮಟ್ಟದ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next