Advertisement

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

01:50 AM Oct 20, 2021 | Team Udayavani |

ಮಂಗಳೂರು: ಒಎನ್‌ಜಿಸಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುಭಾಷ್‌ ಕುಮಾರ್‌ ಅವರು ಎಂಆರ್‌ಪಿಎಲ್‌ ಹಾಗೂ ಘಟಕ ಕಂಪೆನಿಗಳಿಗೆ ಭೇಟಿ ನೀಡಿದರು.

Advertisement

ಅ. 16ರಂದು ಆಗಮಿಸಿದ್ದ ಅವರು ಅ. 18ರ ವರೆಗೆ ಉಪಸ್ಥಿತರಿದ್ದು ಕಂಪೆನಿಯ ಪ್ರಗತಿ ಹಾಗೂ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು. ಆಡಳಿತ ಮಂಡಳಿಯ ನಿರ್ದೇಶಕರು, ಜಂಟಿ ಕಾರ್ಯದರ್ಶಿ ರೋಹಿತ್‌ ಮಾಥುರ್‌, ಸ್ವತಂತ್ರ ನಿರ್ದೇಶಕ ಆರ್‌.ಟಿ. ಅಗರ್‌ವಾಲ್‌ ಉಪಸ್ಥಿತರಿದ್ದರು.

ಎಂಆರ್‌ಪಿಎಲ್‌ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಸುಭಾಷ್‌ ಕುಮಾರ್‌ ಎಂಆರ್‌ಪಿಎಲ್‌ ವತಿಯಿಂದ ತಣ್ಣೀರುಬಾವಿಯಲ್ಲಿ ನಿರ್ಮಿಸಲಾಗುತ್ತಿರುವ ಉಪ್ಪುನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಂಆರ್‌ಪಿಎಲ್‌ನೊಳಗೆ ಇರುವ ಎಫ್‌ಜಿಟಿಯು, ಒಎಂಪಿಎಲ್‌ ಹಾಗೂ ಐಎಸ್‌ಪಿಆರ್‌ಎಲ್‌ ಘಟಕಗಳಿಗೆ ಭೇಟಿ ನೀಡಿದರು. ಅ. 17ರಂದು ಜರಗಿದ ಸಭೆಯಲ್ಲಿ ಎಂಆರ್‌ಪಿಎಲ್‌ನ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.

ಇದನ್ನೂ ಓದಿ:ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್‌, ಸಿವಿಒ ರಾಜೇಶ್‌ ಕುಶ್ವಾ, ನಿರ್ದೇಶಕ (ರೆಫೈನರಿ) ಸಂಜಯ್‌ ವರ್ಮಾ, ಇಲಾಂಗೋ (ಇಡಿ ರಿಫೈನರಿ), ಬಿಎಚ್‌ವಿ ಪ್ರಸಾದ್‌ (ಇಡಿ ಪ್ರಾಜೆಕ್ಟ್ ), ಜಿಜಿಎಂಗಳು, ಹಿರಿಯ ಅಧಿಕಾರಿಗಳು ಹಾಗೂ ಒಎನ್‌ಜಿಸಿಯ ವಿಶಾಲ್‌ ಶರ್ಮಾ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next