Advertisement

ಒಂದು ತಿಂಗಳ ಹಿಂದೆ ಜೆಡಿಎಸ್‌ನಲ್ಲೇ ಉಳಿಯುವ ಮನಸ್ಸಿತ್ತು!;ಜಮೀರ್‌ 

04:50 PM Aug 01, 2017 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ನನ್ನ ರಾಜಕೀಯ ಗುರು. ಅವರ ಋಣ ನನ್ನ ಮೇಲಿದೆ. ಒಂದು ತಿಂಗಳ ಹಿಂದೆ ಜೆಡಿಎಸ್‌ನಲ್ಲೇ ಉಳಿಯುವ ಮನಸ್ಸಿತ್ತು, ಈಗ ಇಲ್ಲ ಎಂದು ಬಂಡಾಯ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ. 

Advertisement

ಮಂಗಳವಾರ 51 ನೇ ಜನ್ಮ ದಿನಾಚರಣೆ ಆಚರಿಸಿಕೊಂಡ ಜಮೀರ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ನಮಗೆ ಒಂದು ತಿಂಗಳ ಹಿಂದೆ ಜೆಡಿಎಸ್‌ನಲ್ಲಿ ಉಳಿದುಕೊಳ್ಳುವ ಮನಸ್ಸಿತ್ತು, ಈಗ ಇಲ್ಲ. ನಮ್ಮ ಮಾಜಿ ಅಣ್ಣ ಕುಮಾರಸ್ವಾಮಿ ಅವರು ಲೂಸ್‌ ಟಾಕ್‌ ಹೇಳಿಕೆ ನೀಡಿ ನಮ್ಮ ಮನಸ್ಸನ್ನು ಹಾಳು ಮಾಡಿದರು. ಮುಂದೆ ಜೆಡಿಎಸ್‌ಗೆ ಮರಳುವ ಪ್ರಶ್ನೆಯೇ ಇಲ್ಲ’. 

‘ನನಗೆ ಆಯ್ಕೆ ಕಾಂಗ್ರೆಸ್‌ ಮಾತ್ರವಾಗಿತ್ತು, ಕೋಮುವಾದಿ ಬಿಜೆಪಿಗೆ ನಾನು ಸೇರ್ಪಡೆ ಆಗುವುದಿಲ್ಲ’ ಎಂದರು. 

ಇದೇ ವೇಳೆ ‘ನನ್ನ ರಾಜಕೀಯ ಗುರು ದೇವೇಗೌಡ, ಕುಮಾರಸ್ವಾಮಿ ಅಲ್ಲ. ದೇವೇಗೌಡರ ವಿರುದ್ಧ ಯಾವುದೇ ಹೇಳಿಕೆ ನೀಡುವುದಿಲ್ಲ’ ಎಂದರು. 

ಕೆಲ ದಿನಗಳ ಹಿಂದೆ ಜಮೀರ್‌ ‘ಚಾಮರಾಜ ಪೇಟೆ ವಿಧಾನಸಭಾ  ಕ್ಷೇತ್ರದಲ್ಲಿ ಜೆಡಿಎಸ್‌ ಗೆದ್ದರೆ ನನ್ನತಲೆ ಕತ್ತರಿಸಿ ಮಾಧ್ಯಮದವರ ಕೈಯಲ್ಲಿ ನೀಡುತ್ತೇನೆ’ ಎಂದಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next