Advertisement

ಎತ್ತಿನಗಾಡಿಗೆ ಟ್ರಕ್‌ ಢಿಕ್ಕಿ: ರೈತ ಸಾವು, ಮೂವರಿಗೆ ಗಂಭೀರ ಗಾಯ

12:14 PM Apr 04, 2018 | Team Udayavani |

ಮುಜಫ‌ರನಗರ : ದಿಲ್ಲಿ – ಡೆಹರಾಡೂನ್‌ ಹೆದ್ದಾರಿಯಲ್ಲಿ ಇಂದು ಬುಧವಾರ ನಸುಕಿನ ವೇಳೆ ಟ್ರಕ್‌ ಒಂದು ಎತ್ತಿನ ಗಾಡಿಗೆ ಢಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ 32ರ ಹರೆಯದ ಓರ್ವ ರೈತ ಮೃತಪಟ್ಟು ಇತರ ಮೂವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಉತ್ತರ ಪ್ರದೇಶದ ನವ್ಲಾ ಗ್ರಾಮದಲ್ಲಿನ ಸಕ್ಕರೆ ಕಾರ್ಖಾನೆಯಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಇಳಿಸಿ ನಾಲ್ಕು ಎತ್ತಿನ ಗಾಡಿಗಳಲ್ಲಿ ರೈತರು ಮರಳುತ್ತಿದ್ದಾಗ ಈ ದುರಂತ ಸಂಭವಿಸಿತು. 

ಮೃತ ರೈತನನ್ನು ಇಕ್ರಾಂ ಎಂದು ಗುರುತಿಸಲಾಗಿದೆ. ಪೊಲೀಸರು ಟ್ರಕ್‌ ಚಾಲಕನನ್ನು ಶೋಧಿಸುತ್ತಿದ್ದಾರೆ.

ಘಟನೆಯನ್ನು ಅನುಸರಿಸಿ ರೈತರು ಕೆಲ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. 

Advertisement

Udayavani is now on Telegram. Click here to join our channel and stay updated with the latest news.

Next