Advertisement

KRS Dam ಭರ್ತಿಗೆ ಒಂದೇ ಅಡಿ! 45 ವರ್ಷಗಳಲ್ಲಿ 32 ಬಾರಿ ಭರ್ತಿ; ಜು. 27ಕ್ಕೆ ಸಿಎಂ ಬಾಗಿನ

12:35 AM Jul 22, 2024 | Team Udayavani |

ಮಂಡ್ಯ: ಕಾವೇರಿ ನದಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರುತ್ತಿದ್ದು, ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ.

Advertisement

124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಪ್ರಸ್ತುತ 123.10 ಅಡಿ ನೀರು ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ 1.70 ಅಡಿ ಮಾತ್ರ ಬಾಕಿ ಇದೆ. ರವಿವಾರ ಸಂಜೆ 8 ಗಂಟೆ ವೇಳೆಗೆ ಜಲಾಶಯಕ್ಕೆ 70,850 ಕ್ಯುಸೆಕ್‌ ನೀರು ಒಳಹರಿವು ಇತ್ತು. ಹೊರಹರಿವು 52,162 ಕ್ಯುಸೆಕ್‌ ಇದೆ. 49.452 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 47.106 ಟಿಎಂಸಿ ನೀರು ಸಂಗ್ರಹವಾಗಿದೆ.

ಅರಸು ಅವರಿಂದ
ಬಾಗಿನ ಸಲ್ಲಿಕೆ ಆರಂಭ
45 ವರ್ಷಗಳಿಂದ ಜಲಾಶಯಕ್ಕೆ ಬಾಗಿನ ಅರ್ಪಿಸುವ ಸಂಪ್ರದಾಯ ನಡೆದು ಬಂದಿದೆ. ಒಡಲು ತುಂಬಿದ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುವ ಸಂಪ್ರದಾಯ ದೇವರಾಜ ಅರಸು ಅವರಿಂದ ಪ್ರಾರಂಭಗೊಂಡಿತು. ಮೊದಲ ಬಾರಿಗೆ 1979ರಲ್ಲಿ ಅರಸು ಅವರು ಬಾಗಿನ ಅರ್ಪಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next