Advertisement

Ayodhya ರಾಮಮಂದಿರ ಬಿಜೆಪಿಯವರ ಪ್ರದರ್ಶನವಾಗಿದೆ :ಕಪಿಲ್ ಸಿಬಲ್

05:59 PM Dec 25, 2023 | Team Udayavani |

ಹೊಸದಿಲ್ಲಿ: “ರಾಮಮಂದಿರದ ಇಡೀ ವಿಷಯವು ಪ್ರದರ್ಶನವಾಗಿದೆ, ಬಿಜೆಪಿಯವರು ರಾಮನ ಬಗ್ಗೆ ಮಾತನಾಡುತ್ತಾರೆ ಆದರೆ ಅವರ ನಡವಳಿಕೆ, ಅವರ ಸ್ವಭಾವವು ಭಗವಾನ್ ರಾಮನಿಗೆ ಎಲ್ಲಿಯೂ ಹತ್ತಿರವಾಗುವುದಿಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದಾರೆ.

Advertisement

ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ವಿಪಕ್ಷಗಳ ನಿಲುವಿನ ಕುರಿತು ಪ್ರತಿಕ್ರಿಯಿಸಿ, ”ಸತ್ಯ, ಸಹನೆ, ತ್ಯಾಗ, ಮತ್ತು ಇತರರಿಗೆ ಗೌರವವು ಭಗವಾನ್ ರಾಮನ ಕೆಲವು ಲಕ್ಷಣಗಳಾಗಿವೆ ಆದರೆ ಬಿಜೆಪಿಯವರು ಸಂಪೂರ್ಣವಾಗಿ ವಿರುದ್ಧವಾಗಿ ಮಾಡುತ್ತಾ ಮತ್ತು ನಾವು ರಾಮನನ್ನು ವೈಭವೀಕರಿಸುತ್ತಿದ್ದೇವೆ ಎಂದು ಹೇಳುತ್ತಾರೆ”ಎಂದರು.

ಜನವರಿ 22 ರಂದು ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೀರಾ ಎಂದು ಪ್ರಶ್ನಿಸಿದಾಗ ”ನನ್ನ ಹೃದಯದಲ್ಲಿ ರಾಮನಿದ್ದು, ನಾನು ಯಾವುದೇ ತೋರಿಕೆಕಾಗಿ ಕೆಲಸ ಮಾಡುವುದಿಲ್ಲ” ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next