Advertisement

ಭಾನುವಾರ, ರಾಮ ಬರುವನು!

10:33 PM Nov 09, 2019 | Team Udayavani |

ರಾಮ ಬರುತ್ತಾನೆ! ಈ ಪುಳಕದಲ್ಲೇ, ಪ್ರತಿ ಭಾನುವಾರ ಇಡೀ ಭಾರತ ಕಾದು ಕುಳಿತಿರುತ್ತಿತ್ತು. 1987ರಲ್ಲಿ ದೂರದರ್ಶನದಲ್ಲಿ ಪ್ರಸಾರಗೊಳ್ಳುತ್ತಿದ್ದ “ರಾಮಾಯಣ’ ಧಾರಾವಾಹಿ, ಮೋಡಿ ಮಾಡಿದ ಪರಿ ಈ ಬಗೆಯದ್ದು. ಧಾರಾವಾಹಿ ಮೂಡಿಬರುವಾಗ ಅಂದು ಬೀದಿಗಳಲ್ಲಿ ಜನರ ಸಂಚಾರವೇ ಇರುತ್ತಿರಲಿಲ್ಲ. ಟಿವಿ ಮುಂದೆ ಜಮಾಯಿಸಿರುತ್ತಿದ್ದರು. ಭಾನುವಾರದಂದು ಜನರು ಬರುವುದಿಲ್ಲವೆಂದು, ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ನಟ ಅರುಣ್‌ ಗೋವಿಲ್‌ ತೆರೆ ಮೇಲೆ ರಾಮನಾಗಿ ಬರುವಾಗ, ಎಷ್ಟೋ ಮಂದಿ ಊದಿನಕಡ್ಡಿ ಹಚ್ಚುತ್ತಿದ್ದರು. ಸ್ನಾನ ಮಾಡಿಕೊಂಡು, ಮಡಿ ಬಟ್ಟೆ ತೊಟ್ಟು ರಾಮಾಯಣ ನೋಡುವ ಒಂದಿಷ್ಟು ಮಂದಿಯೂ ಇದ್ದರು. ರಮಾನಂದ ಸಾಗರ್‌ ನಿರ್ದೇಶನದ ಈ ಧಾರಾವಾಹಿ, 78 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next