Advertisement

ಮಮತಾಗೆ ಉಮರ್‌ ಅಬ್ದುಲ್ಲ ಬೆಂಬಲ; ಪ.ಬಂಗಾಲದಲ್ಲಿ ಟಿಎಂಸಿಗೆ ಪ್ರಚಂಡ ಜಯ

09:04 AM May 17, 2019 | Team Udayavani |

ಶ್ರೀನಗರ : ಪಶ್ಚಿಮ ಬಂಗಾಲದಲ್ಲಿ ಮತದಾರರನ್ನು ಧ್ರುವೀಕರಿಸುವ ಬಿಜೆಪಿಯ ಯತ್ನಗಳು ಕೈಗೂಡುವುದಿಲ್ಲ ; ಅಂತೆಯೇ ತೃಣಮೂಲ ಕಾಂಗ್ರೆಸ್‌ ರಾಜ್ಯದಲ್ಲಿನ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯ ಗಳಿಸುವುದು ಖಚಿತ ಎಂದು ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಉಮರ್‌ ಅಬ್ದುಲ್ಲ ಇಂದು ಗುರುವಾರ ಹೇಳಿದ್ದಾರೆ.

Advertisement

ಬಿಜೆಪಿ ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಆಯೋಗದ ಜತೆ ಸೇರಿಕೊಂಡು ತನಗೆ ಬೇಕಾದ ರೀತಿಯಲ್ಲಿ ಪ್ರಚಾರ ಕೈಗೊಂಡು, ಮತದಾರರನ್ನು ವಿಭಜಿಸಿ, ನೀತಿ ಸಂಹಿತೆಯ ಉಲ್ಲಂಘನೆ ಗೈದು, ತನ್ನ ಗೆಲುವಿಗೆ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡಿದರೂ ಅಂತಿಮವಾಗಿ ಮೇ 23ರಂದು ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವೇ ರಾಜ್ಯದಲ್ಲಿ ಪ್ರಚಂಡ ಜಯ ಸಾಧಿಸುತ್ತದೆ ಎಂದು ಉಮರ್‌ ಅಬ್ದುಲ್ಲ ತಮ್ಮ ಟ್ವಿಟರ್‌ ಪೋಸ್ಟ್‌ ನಲ್ಲಿ ಬರೆದಿದ್ದಾರೆ.

ಕೋಲ್ಕತದಲ್ಲಿ ಅಮಿತ್‌ ಶಾ ಅವರ ರಾಲಿಯಲ್ಲಿ ಹಿಂಸೆ ಭುಗಿಲೆದ್ದಿರುವುದಕ್ಕೆ ಪ್ರತಿಯಾಗಿ ಉಮರ್‌ ಈ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next