Advertisement

ಗುಧ್ದೋಡಿದ ಕಾರಿಗೆ ವೃದ್ಧೆ ಬಲಿ

11:03 AM Sep 03, 2017 | Team Udayavani |

ಬೆಂಗಳೂರು: ವೇಗವಾಗಿ ಬಂದ ಕಾರೊಂದು ಡಿಕ್ಕಿಹೊಡೆದ ಪರಿಣಾಮ ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಶವಂತಪುರ ಬಳಿಯ ಮತ್ತಿಕೆರೆಯ ಎಚ್‌ಎಂಟಿ ರಸ್ತೆಯಲ್ಲಿ
ಶನಿವಾರ ನಡೆದಿದೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Advertisement

ಮತ್ತಿಕೆರೆ ನಿವಾಸಿ ಎಲಿಯಮ್ಮ (74) ಮೃತ ವೃದ್ಧೆ. ಕಾರು ಡಿಕ್ಕಿ ಹೊಡೆದ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಕಾರಿನ ನಂಬರ್‌ ಪತ್ತೆಯಾಗಿಲ್ಲ. ಆರೋಪಿಗಾಗಿ
ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಿಕೆರೆಯಲ್ಲಿ ಪತಿ ಜಾಕೊಬ ಜತೆ ನೆಲೆಸಿರುವ ಎಲಿಯಮ್ಮ, ಶುಕ್ರವಾರ ಬೆಳಿಗ್ಗೆ ಮನೆ ಬಳಿಯ ಚರ್ಚ್‌ಗೆ ಹೋಗಿದ್ದರು. ಪ್ರಾರ್ಥನೆ ಮುಗಿಸಿ ಮನೆಗೆ ಮರಳುವಾಗ 8 ಗಂಟೆ ಸುಮಾರಿಗೆ ಎಚ್‌ಎಂಟಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕೆಂಪು ಬಣ್ಣದ ಮಾರುತಿ ಆಲ್ಟೋ ಕಾರು ಡಿಕ್ಕಿ
ಹೊಡೆದಿದೆ. ಪರಿಣಾಮ ಎಲಿಯಮ್ಮ ನಾಲ್ಕೈದು ಅಡಿಯಷ್ಟು ಮೇಲೆ ಹಾರಿ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿದ್ದ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ
ಸೆರೆಯಾಗಿವೆ. ಆದರೆ, ಇದರಲ್ಲಿ ಕಾರಿನ ನೊಂದಣಿ ಸಂಖ್ಯೆ ಸ್ಪಷ್ಟವಾಗಿಲ್ಲ. ಕಾರಿನ ಬಣ್ಣ ಕೆಂಪು ಎಂಬುದು ತಿಳಿದು ಬಂದಿದೆ. ಹೀಗಾಗಿ ಮುಂದಿನ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯವಾಳಿಗಳನ್ನು ಸಂಗ್ರಹಿಸಿದ್ದು, ಪರಿಶೀಲನೆ ನಡೆಯುತ್ತಿದೆ ಎಂದು ಯಲಹಂಕ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next