Advertisement

ಹಳೆಯ ಎ ಮತ್ತು ಹೊಸ ಪ್ಲಸ್‌

06:00 AM Oct 05, 2018 | |

“ಯಾವುದೇ ಕಾರಣಕ್ಕೂ ಇದು ರಿಲೀಸ್‌ ಆಗಬಾರದು…!
– ಹೀಗಂತ “ಎ ಪ್ಲಸ್‌’ ಚಿತ್ರದ ಶೀರ್ಷಿಕೆ ಕೆಳಗೆ ಬರೆಯಲಾಗಿತ್ತು. ಗಿಮಿಕ್‌­ಗಾಗಿ ಈ ಅಡಿಬರಹ ಬಳಸಲಾಗಿದೆಯಾ? ಈ ಪ್ರಶ್ನೆಗೆ ಉತ್ತರಿಸಲು ಮೈಕ್‌ ಎತ್ತಿಕೊಂಡರು ನಿರ್ದೇಶಕ ವಿಜಯ್‌ ಸೂರ್ಯ. ಅವರಿಗೆ ಇದು ಮೊದಲ ಚಿತ್ರ. ಅಕ್ಟೋಬರ್‌ 5 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೊದಲು ಮಾತಿಗಿಳಿದ ನಿರ್ದೇಶಕರು, “ಯಾವುದೇ ಒಂದು ಚಿತ್ರದ ಪೋಸ್ಟರ್‌ ಇರಲಿ, ಟೀಸರ್‌, ಟ್ರೇಲರ್‌ ಇರಲಿ, ಆ ಚಿತ್ರದ ಬಗ್ಗೆ ಒಂದೊಂದು ಕಥೆ ಹೇಳುತ್ತವೆ. ಹಾಗೆಯೇ, ಇಲ್ಲಿರುವ ಅಡಿಬರಹ ಕೂಡ ಕುತೂಹಲ ಮೂಡಿಸಿದೆ. ಆದರೆ, ಯಾಕೆ ಹೀಗೆ ಬರೆಯಲಾಗಿದೆ ಎಂಬುದನ್ನು ಚಿತ್ರ­ದಲ್ಲೇ ನೋಡಬೇಕು. ಚಿತ್ರ ನೋಡಿದಾಗಲಷ್ಟೇ ಅದರ ಅರ್ಥ ಗೊತ್ತಾಗುತ್ತೆ. ನಾನು ಉಪೇಂದ್ರ ಅವರ ಬಳಿ ಕೆಲಸ ಮಾಡಿ­ದ್ದೇನೆ. ಅವರ ಸೂಕ್ಷ್ಮತೆ ಅರಿತಿದ್ದೇನೆ. ಅವರ ಜೊತೆಗಿನ ಅನುಭವ ಬೆರೆಸಿ, ಈ ಚಿತ್ರ ಮಾಡಿದ್ದೇನೆ. ಅವರ “ಎ’ ಚಿತ್ರಕ್ಕೂ ನನ್ನ “ಎ ಪ್ಲಸ್‌’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ’ ಎಂಬುದು ನಿರ್ದೇಶಕರ ಮಾತು. ಎಲ್ಲಾ ಸರಿ, “ಎ ಪ್ಲಸ್‌’ ವಿಶೇಷತೆ ಏನು? “ಲವ್‌ ಥ್ರಿಲ್ಲರ್‌ ಅಂದುಕೊಳ್ಳಬಹುದು, ರಾಜಕೀಯ ವಿಷಯಗಳ ಮೇಲಿನ ಚಿತ್ರಣವೂ ಇದೆ ಅಂದುಕೊಳ್ಳಬಹುದು. ಆ್ಯಕ್ಷನ್‌, ಅಂಡರ್‌ವರ್ಲ್ಡ್ ಅಂಶಗಳು ಇರಬಹುದಾ ಎಂಬ ಪ್ರಶ್ನೆ ಕಾಡಬಹುದು. ಆದರೆ, ಇದು ಇವೆಲ್ಲದರ ಮಿಶ್ರಣದ ಜೊತೆಗೆ ಹೊಸತೇನನ್ನೋ ಹೇಳಲಿದೆ. ಅದನ್ನು ಚಿತ್ರದಲ್ಲೇ ನೋಡಿ’ ಅಂತ ಹೇಳಿ ಸುಮ್ಮನಾದರು ವಿಜಯ್‌ ಸೂರ್ಯ.

Advertisement

ನಿರ್ಮಾಪಕ ಪ್ರಭುಕುಮಾರ್‌ ಅವರಿಗೆ ಇದು ಮೊದಲ ಚಿತ್ರ. ಅವರು ಅರ್ಧ ಗಂಟೆ ಕಥೆ ಕೇಳಿದರಂತೆ. ಆಮೇಲೆ, ಮುಂದಕ್ಕೆ ಕಥೆ ಕೇಳದೆ, ಕೆಲ ಪ್ರಶ್ನೆಗಳನ್ನು ಕೇಳಿದರಂತೆ. ಆಗ ನಿರ್ದೇಶಕರು, ಅದೇ ಸಿನಿಮಾ ಅಂದರಂತೆ. ಇಲ್ಲಿ ಹೊಸ ವಿಷಯ ಇದೆ ಎಂಬ ಕಾರಣಕ್ಕೆ ನಾನು ಚಿತ್ರ ಮಾಡೋಕೆ ಗ್ರೀನ್‌ಸಿಗ್ನಲ್‌ ಕೊಟ್ಟೆ. ರಾಜ್ಯಾದ್ಯಂತ 150 ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇನೆ. ಜಯಣ್ಣ ವಿತರಣೆ ಮಾಡುತ್ತಿದ್ದಾರೆ’ ಎಂದು ವಿವರ ಕೊಟ್ಟರು ಪ್ರಭು­ಕುಮಾರ್‌.

ನಾಯಕ ಸಿದ್ಧು ಅವರಿಗೆ ಇದು ಮೊದಲ ಚಿತ್ರ. ಹಾಗಂತ ಅನುಭವ ಇಲ್ಲವೆಂದಲ್ಲ. ಅವರು ಹಿಂದೆ ಸಿನಿಮಾಗಳಲ್ಲಿ ನಟಿಸಿದ್ದರೂ, “ಎ ಪ್ಲಸ್‌’ ಅವರಿಗೆ ಹೊಸ ಅನು ಭವ ಕಟ್ಟಿ ಕೊಟ್ಟಿದೆ­ಯಂತೆ. ಪ್ರತಿ­ಯೊಬ್ಬರಿಗೂ ಲೈಫ‌ಲ್ಲಿ ಒಂದು ಗುರಿ ಇರುತ್ತೆ. ಇಲ್ಲೂ ನಾಯಕನಿಗೊಂದು ಗುರಿ ಇದೆ. ಅದನ್ನು ತಲುಪಬೇಕೆಂದು ಜರ್ನಿ ಶುರುಮಾಡುತ್ತಾನೆ. ತನ್ನದೇ ಜವಾಬ್ದಾರಿಯೊಂದಿಗೆ ಆ ಗುರಿ ತಲುಪುತ್ತಾನಾ ಇಲ್ಲವಾ ಅನ್ನೋದು ಕಥೆ’ ಅಂದರು ಸಿದ್ಧು.

ನಾಯಕಿ ಸಂಗೀತಾಗೆ ಇದು ಮೊದಲ ಚಿತ್ರ. ಕಿರುತೆರೆಯಿಂದ ನೇರ ಚಿತ್ರರಂಗಕ್ಕೆ ಬರಲು ಈ ಕಥೆ ಕಾರಣ ಎಂಬುದು ಅವರ ಅಂಬೋಣ.ಅವರಿಲ್ಲಿ ಯಶಸ್ವಿನಿ ಪಾತ್ರ ಮಾಡಿದ್ದು, ಹೀರೋ ಹಿಂದೆ ಬೀಳುವ ಕ್ರೇಜಿ ಲವ್ವರ್‌ ಗರ್ಲ್ ಪಾತ್ರವಂತೆ. ಇಲ್ಲಿ ಎಲ್ಲವೂ ಕುತೂಹಲ ಕೆರಳಿಸುತ್ತ ಹೋಗುತ್ತದೆ. ಇಡೀ ಚಿತ್ರ ಎಲ್ಲಾ ವರ್ಗಕ್ಕೂ ಇಷ್ಟವಾಗುತ್ತೆ ಎಂಬುದು ಅವರ ಮಾತು. ಮುರಳಿ ಮೋಹನ್‌, ಆಶಾರಾಣಿ, ಸುನೀಲ್‌ಕುಮಾರ್‌, ನಾಗೇಶ್‌ ಮಾತನಾಡಿದರು. ಭುಪಿಂದರ್‌ ಸಿಂಗ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಗಣೇಶ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next