Advertisement

ಬಜೆಟ್‌ ಒಕ್ಕಲಿರ ಪರ; ರಿಪೋರ್ಟ್‌ ಸೆನ್ಸ್‌ಲೆಸ್‌:ಎಚ್‌ಡಿಡಿ ಕಿಡಿ 

02:40 PM Jul 07, 2018 | |

ಬೆಂಗಳೂರು: ಬಜೆಟ್‌ನಲ್ಲಿ ಒಕ್ಕಲಿಗರಿಗೆ 32 % ಲಾಭ ಸಿಕ್ಕಿದೆ ಎನ್ನುವ ವರದಿ ವಿರುದ್ಧ ಮಾಜಿ ಪ್ರಧಾನಿ , ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಿಡಿ ಕಾರಿದ್ದು ಈ ವರದಿ ಅರ್ಥವಿಲ್ಲದ್ದು ಎಂದಿದ್ದಾರೆ.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಡಿ ಬಜೆಟ್‌ನಲ್ಲಿ 32 % ಒಕ್ಕಲಿಗರಿಗೆ ಲಾಭವಾಗಿದೆ ಅಂತ ಲೆಕ್ಕ ಹಾಕಿದ್ದು ಯಾರು? ಒಕ್ಕಲಿಗರು ಮಂಗಳೂರಿನಲ್ಲೂ ಇದ್ದಾರೆ, ಬೀದರ್‌ನಲ್ಲೂ ಇದ್ದಾರೆ. ಬಜೆಟ್‌ನಿಂದ ಕರಾವಳಿ ಭಾಗ ಸೇರಿದಂತೆ ಎಲ್ಲರಿಗೂ ಲಾಭ ಸಿಕ್ಕಿದೆ ಎಂದರು. 

ಬಜೆಟ್‌ ಕುರಿತು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಆ ಕುರಿತು ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ, ಕುಮಾರಸ್ವಾಮಿ ಉತ್ತರ ನೀಡುತ್ತಾರೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next