Advertisement

ಜನಸಂಪರ್ಕದಿಂದ ಅಧಿಕಾರಿಗಳು ಜನರ ಬಳಿಗೆ 

09:00 AM Jul 23, 2017 | Team Udayavani |

ಬ್ರಹ್ಮಾವರ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಜರಗುತ್ತಿರುವ ದೇಶದಲ್ಲೇ ವಿನೂತನವೆನಿಸಿದ ಗ್ರಾಮ ಮಟ್ಟದ ಜನಸಂಪರ್ಕ ಸಭೆಗಳಿಂದ ಅಧಿಕಾರಿಗಳು ಜನರ ಬಳಿಗೆ ತಲುಪು ವಂತಾಗಿದೆ. ಸಾರ್ವಜನಿಕರು ಕಚೇರಿ ಗಳಿಗೆ ಅಲೆದಾಡುವುದು ತಪ್ಪಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಶನಿವಾರ ಕೆಂಜೂರು ಸುರಕ್ಷಿತ ಸಭಾಭವನದಲ್ಲಿ ಕೆಂಜೂರು ಗ್ರಾಮ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.

ದಾಖಲೆ ಕಾರ್ಯಗಳು
ಉಡುಪಿ ಕ್ಷೇತ್ರದ ಗ್ರಾಮಾಂತರ ಭಾಗಕ್ಕೆ ಕೋಟ್ಯಂತರ ರೂ. ಅನುದಾನ, ಉಚಿತ ವಿದ್ಯುತ್‌ ಸಂಪರ್ಕ, ಬಿಪಿಎಲ್‌ ಕಾರ್ಡ್‌ ವಿತರಣೆ, ನರ್ಮ್ ಬಸ್‌ ಸಂಚಾರ ಮತ್ತಿತರ ಸೌಕರ್ಯಗಳನ್ನು ಕಲ್ಪಿಸ ಲಾಗಿದೆ ಎಂದು ಸಚಿವ ಪ್ರಮೋದ್‌ ಹೇಳಿದರು.

ಸಾಲ ಮನ್ನಾ
ರಾಜ್ಯ ಸರಕಾರವು ಘೋಷಿಸಿದ ಸಾಲ ಮನ್ನಾದಿಂದ ಕೊಕ್ಕರ್ಣೆ ಸಿಂಡಿಕೇಟ್‌ ರೈ.ಸೇ.ಸ.ಸಂಘ ಒಂದರಲ್ಲೇ 739 ಸದಸ್ಯರು 3.43 ಕೋಟಿ ರೂ. ಮೊತ್ತದ ಪ್ರಯೋಜನ ಪಡೆದಿದ್ದಾರೆ ಎಂದರು.

ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ವಿಶೇಷ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಬಗರ್‌ ಹುಕುಂ ಸಮಿತಿ ಅಧ್ಯಕ್ಷ ಮೈರ್ಮಾಡಿ ಅಶೋಕ್‌ ಕುಮಾರ್‌ ಶೆಟ್ಟಿ, ತಾ.ಪಂ. ಸದಸ್ಯೆ ಡಾ| ಸುನೀತಾ ಡಿ. ಶೆಟ್ಟಿ, ಪಂಚಾಯತ್‌ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷೆ ಲತಾ, ಸದಸ್ಯರು ಉಪಸ್ಥಿತರಿದ್ದರು.

Advertisement

ಇದೇ ಸಂದರ್ಭ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಪಂ. ಸದಸ್ಯೆ ಗೌರಿ ಸ್ವಾಗತಿಸಿ, ತಾ.ಪಂ. ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಸ್ತಾವನೆಗೈದರು.

ಆ. 1ರಿಂದ ಮರಳು 

ಹಸಿರು ಪೀಠದ ಆದೇಶದಿಂದ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಜನಸಾಮಾನ್ಯರಿಗೆ ತೊಂದರೆಯಾಗಿದೆ. ಆದರೆ ಬರುವ ಆಗಸ್ಟ್‌ 1ರಿಂದ ಮತ್ತೆ ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಗೊಂಡು ಧಾರಾಳವಾಗಿ ಮರಳು ದೊರೆಯ ಲಿದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next