Advertisement

ಸಾರ್ವಜನಿಕರಿಗೆ ಕಚೇರಿ ಕೆಲಸ ಲಭ್ಯವಿಲ್ಲ

10:40 PM Apr 19, 2020 | Sriram |

ಉಡುಪಿ: ವಿಧಾನದ ಸೌಧದ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಗ್ರೂಪ್‌ ಎ, ಬಿ, ಎಲ್ಲ ಅಧಿಕಾರಿಗಳು ಮತ್ತು ಗ್ರೂಪ್‌ ಸಿ, ಮತ್ತು ಗ್ರೂಪ್‌ ಡಿ ವರ್ಗದ ಶೇ. 33ರಷ್ಟು ಸಿಬಂದಿ ಎ. 20ರಿಂದ ಸರಕಾರಿ ಕಚೇರಿಗಳಲ್ಲಿ ಬಂದು ಕಾರ್ಯನಿರ್ವಹಿಸಲು ರಾಜ್ಯ ಮುಖ್ಯ ಕಾರ್ಯದರ್ಶಿ ಟಿ ಎಂ. ವಿಜಯ ಬಾಸ್ಕರ್‌ ಅವರು ಸೂಚಿಸಿದ್ದಾರೆ. ಅಂತೆಯೇ ಜಿಲ್ಲೆಯಲ್ಲೂ ಸರಕಾರಿ ಕಚೇರಿಗಳು ತೆರೆಯುವ ಬಗ್ಗೆ ಆಯಾ ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಆದರೆ ಕಚೇರಿ ಕೆಲಸಗಳು ಯಾವುದೇ ಸಾರ್ವಜನಿಕರಿಗೆ ತೆರೆದಿರುವುದಿಲ್ಲ.

Advertisement

ಕೋವಿಡ್ 19 ಸಮಯದಲ್ಲಿ ಈಗಾಗಲೇ ಅಗತ್ಯ ಸೇವೆಗಳಾದ ಆರೋಗ್ಯ ವೈದ್ಯಕೀಯ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ,ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ವಾರ್ತಾ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ಕೃಷಿ, ಕಾರ್ಮಿಕ, ತೋಟಗಾರಿಕೆ ಮೊದಲಾದ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಎಲ್ಲ ಸರಕಾರಿ ಕಚೇರಿಗಳು ತೆರೆಯಲಿವೆ. ಸರಕಾರಿ ಕಚೇರಿಗಳು ಕಾರ್ಯಾರಂಭಿಸುವಾಗ ಎಷ್ಟು ಮಂದಿ ಹಾಜರಾಗಬೇಕೆಂಬ ಬಗ್ಗೆ ಆಯಾ ಇಲಾಖೆಯ ಮುಖ್ಯಸ್ಥರು ನಿರ್ಧರಿಸಲ್ಲಿದ್ದು ಸಾರ್ವಜನಿಕರಿಗೆ ಯಾವುದೇ ಕಚೇರಿ ಕೆಲಸಗಳು ಲಭ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೀಡಿ: ಆದೇಶ ಬಂದಿಲ್ಲ
ಉಡುಪಿ: ಕೋವಿಡ್ 19 ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿರುವ ಬೀಡಿ ಉದ್ಯಮ ದ.ಕ. ಜಿಲ್ಲೆಯಲ್ಲಿ ಎ. 20ರಿಂದ ಪುನರಾರಂಭಗೊಳ್ಳಲಿದೆ. ಆದರೆ ಉಡುಪಿಯಲ್ಲಿ ಆರಂಭವಾಗುವ ಸಾಧ್ಯತೆ ಇಲ್ಲ.

ದಕ್ಷಿಣ ಕನ್ನಡಲ್ಲಿ ಬೀಡಿ ಮಾಲಕರು, ಕಂಟ್ರಾಕ್ಟ್ ದಾರರು, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕಾರ್ಮಿಕರಿಗೆ ಕೆಲಸ ನೀಡಲು ಬೀಡಿ ಮಾಲಕರು ಒಪ್ಪಿಗೆ ಸೂಚಿಸಿದ್ದಾರೆ. ಆದುದರಿಂದ ಸೋಮವಾರದಿಂದ ಅಲ್ಲಿ ಬೀಡಿ ಕೆಲಸ ಆರಂಭವಾಗಲಿದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಆಗಿಲ್ಲ.

ಅಸಂಘಟಿತ ಕಾರ್ಮಿಕರ ಅಡಿಯಲ್ಲಿ ಬರುವ ಬೀಡಿ ಕೈಗಾರಿಕೆಯಲ್ಲಿ ಜಿಲ್ಲೆಯಲ್ಲಿ ಸುಮಾರು 50 ಸಾವಿರದಷ್ಟು ಸಂಖ್ಯೆಯ ಮಹಿಳಾ ಬೀಡಿ ಕಾರ್ಮಿಕರಿದ್ದಾರೆ. 30ರಿಂದ 40 ಬೀಡಿ ಖರೀದಿಸುವ ಮಾಲಕರಿದ್ದಾರೆ. ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳ ಹಳ್ಳಿ ಹಳ್ಳಿಗಳಿಗೆ ಬೀಡಿ ಉದ್ಯಮ ವ್ಯಾಪಿಸಿಕೊಂಡಿದೆ.

Advertisement

ಬೀಡಿ ಆರಂಭಿಸುವ ಕುರಿತಂತೆ ಸಚಿವರ ಹೇಳಿಕೆ ಬಿಟ್ಟರೆ ಬೇರೆ ಯಾವುದೇ ಆದೇಶ ಹೊರಬಿದ್ದಿಲ್ಲ. ಹೀಗಾಗಿ ಎ.20ರಂದು ಆರಂಭವಾಗುವುದು ಅನುಮಾನವಿದೆ ಎಂದು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್‌ನ ಅಧ್ಯಕ್ಷ ಮಹಾಬಲ ವಡೇರಹೋಬಳಿ ತಿಳಿಸಿದ್ದಾರೆ.

ಆದೇಶ ಬಂದಿಲ್ಲ
ಜಿಲ್ಲೆಯಲ್ಲಿ ಬೀಡಿ ಉದ್ಯಮ ಆರಂಭಿಸುವ ಬಗ್ಗೆ ಇದುವರೆಗೆ ಯಾವುದೇ ಆದೇಶಗಳು ಕಚೇರಿಗೆ ಬಂದಿಲ್ಲ.ನೆರೆಯ ದ.ಕ. ಜಿಲ್ಲೆಯಲ್ಲಿ ಆರಂಭಿಸುವ ಬಗ್ಗೆ ತಿಳಿದುಕೊಂಡಿದ್ದೇನೆ.ನಮ್ಮ ಉಡುಪಿ ಜಿಲ್ಲೆಯಲ್ಲಿ ಆರಂಭಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ .
-ಜಿ.ಜಗದೀಶ್‌,
ಜಿಲ್ಲಾಧಿಕಾರಿಗಳು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next